ಮಿತಾಕ್ಷರದಂತಹ ಅಪೂರ್ವ ಗ್ರಂಥ ಬರೆದವಿಜ್ಞಾನೇಶ್ವರ, ಕವಿರಾಜಮಾರ್ಗಕಾರ, ಸೂಫಿ ತತ್ವದ ಬಗ್ಗೆ ವಿಸ್ತೃತ ಗ್ರಂಥ ಬರೆದ ಸೂಫಿ ಸಂತ ಬಂದಾನವಾಜ ಇಲ್ಲಿಯವರು. ರಾಷ್ಟ್ರಕೂಟರ ರಾಜಧಾನಿ ಮಳಖೇಡವಾಗಿತ್ತು. ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಮೊಗಲರು, ಬಹಮನಿಗಳು ಹಾಗೂ ನಿಜಾಮರು ಈ ಭಾಗವನ್ನು ಆಳಿದ್ದಾರೆ. ಮಳಖೇಡ ಹಾಗೂ ಬಸವ ಕಲ್ಯಾಣಗಳು ರಾಜಧಾನಿಯಾಗಿದ್ದವು’ ಎಂದು ಹೇಳಿದರು.