<p><strong>ಆಳಂದ</strong>: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿನ ಶಿವಲಿಂಗೇಶ್ವರ ಮಠಕ್ಕೆ ಭಕ್ತರು ಅರ್ಪಿಸಿದ ಜೋಳದ ತೆನೆಗಳ ರಾಶಿ ಮಾಡುವ ಹಂತಿ ಉತ್ಸವ ಶಾಂತಲಿಂಗೇಶ್ವರ ಗವಿಮಠದ ಆವರಣದಲ್ಲಿ ನಡೆಯಿತು.</p>.<p>ಬೆಳದಿಂಗಳಲ್ಲಿ ರೈತರೂ ಮೇಟಿ ಹೊಡೆದು ಸುತ್ತಲು ಜೋಳದ ತೆನೆ ಸಂಗ್ರಹಿಸಿಟ್ಟಿದ್ದರು. ವಿವಿಧ ಗ್ರಾಮಗಳ ರೈತರು ಬೆಳೆದ ಜೋಳದ ತೆನೆ ಶಿವಲಿಂಗೇಶ್ವರ ಮಠಕ್ಕೆ ಸಮರ್ಪಿಸುವುದು ವಾಡಿಕೆ.</p>.<p>ಹಂತಿ ಕಟ್ಟಿ ರಾಶಿ ಮಾಡುವ ಆಚರಣೆಗೆ ವಿರಕ್ತಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠನ ಶಾಂತಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಮೇಟಿ ಪೂಜೆ , ಜೋಳದ ಖಣದ ಪೂಜೆ ಕೈಗೊಳ್ಳಲಾಯಿತು.</p>.<p>ಮಹಿಳೆಯರಿಂದ ಜೋಳದ ಗೂಡು ಮುರಿಯುವದು ಮತ್ತಿತರ ಸಂಪ್ರಾದಾಯಿಕ ಆಚರಣೆಗಳು ನಡೆದವು. ಜೋಡೆತ್ತುಗಳ ಮೂಲಕ ಮೇಟಿ ಸುತ್ತ ಹಂತಿ ಹೊಡೆಯುವದು ವಿಶೇಷವಾಗಿತ್ತು. ಜನಪದ ಕಲಾವಿದರ ಹಂತಿ ಹಾಡುಗಳ ಗಾಯನ ಉತ್ಸವಕ್ಕೆ ಕಳೆ ತಂದಿತು.</p>.<p>ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿದರು.</p>.<p>ಶಾಂತವೀರ ಸ್ವಾಮೀಜಿ, ಶಿವದೇವಿ ಮಾತಾಜಿ ಉಪಸ್ಥಿತರಿದ್ದರು. ಗದ್ದೆಪ್ಪ ಸಕ್ಕರಗಿ, ಮಲ್ಲಪ್ಪ ಪ್ಯಾಟಿ, ಶಾಂತಮಲ್ಲಪ್ಪ ಬುರುಡ, ಶರಣಬಸಪ್ಪ ಕಡಗಂಚಿ, ಶಿವಪುತ್ರಪ್ಪ ಸಾಲಿ, ಸಿದ್ದಾರೂಡ ಕಂಬಾರ, ಅಂಬಣ್ಣಾ ಮಾಸ್ತರ್, ಶಿವಲಿಂಗಪ್ಪ ಪರೀಟ ಅವರಿಂದ ರಾತ್ರಿ ಹಂತಿ ಹಾಡುಗಳ ಗಾಯನ ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿನ ಶಿವಲಿಂಗೇಶ್ವರ ಮಠಕ್ಕೆ ಭಕ್ತರು ಅರ್ಪಿಸಿದ ಜೋಳದ ತೆನೆಗಳ ರಾಶಿ ಮಾಡುವ ಹಂತಿ ಉತ್ಸವ ಶಾಂತಲಿಂಗೇಶ್ವರ ಗವಿಮಠದ ಆವರಣದಲ್ಲಿ ನಡೆಯಿತು.</p>.<p>ಬೆಳದಿಂಗಳಲ್ಲಿ ರೈತರೂ ಮೇಟಿ ಹೊಡೆದು ಸುತ್ತಲು ಜೋಳದ ತೆನೆ ಸಂಗ್ರಹಿಸಿಟ್ಟಿದ್ದರು. ವಿವಿಧ ಗ್ರಾಮಗಳ ರೈತರು ಬೆಳೆದ ಜೋಳದ ತೆನೆ ಶಿವಲಿಂಗೇಶ್ವರ ಮಠಕ್ಕೆ ಸಮರ್ಪಿಸುವುದು ವಾಡಿಕೆ.</p>.<p>ಹಂತಿ ಕಟ್ಟಿ ರಾಶಿ ಮಾಡುವ ಆಚರಣೆಗೆ ವಿರಕ್ತಮಠದ ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ, ಹಿರೇಮಠನ ಶಾಂತಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಮೇಟಿ ಪೂಜೆ , ಜೋಳದ ಖಣದ ಪೂಜೆ ಕೈಗೊಳ್ಳಲಾಯಿತು.</p>.<p>ಮಹಿಳೆಯರಿಂದ ಜೋಳದ ಗೂಡು ಮುರಿಯುವದು ಮತ್ತಿತರ ಸಂಪ್ರಾದಾಯಿಕ ಆಚರಣೆಗಳು ನಡೆದವು. ಜೋಡೆತ್ತುಗಳ ಮೂಲಕ ಮೇಟಿ ಸುತ್ತ ಹಂತಿ ಹೊಡೆಯುವದು ವಿಶೇಷವಾಗಿತ್ತು. ಜನಪದ ಕಲಾವಿದರ ಹಂತಿ ಹಾಡುಗಳ ಗಾಯನ ಉತ್ಸವಕ್ಕೆ ಕಳೆ ತಂದಿತು.</p>.<p>ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿದರು.</p>.<p>ಶಾಂತವೀರ ಸ್ವಾಮೀಜಿ, ಶಿವದೇವಿ ಮಾತಾಜಿ ಉಪಸ್ಥಿತರಿದ್ದರು. ಗದ್ದೆಪ್ಪ ಸಕ್ಕರಗಿ, ಮಲ್ಲಪ್ಪ ಪ್ಯಾಟಿ, ಶಾಂತಮಲ್ಲಪ್ಪ ಬುರುಡ, ಶರಣಬಸಪ್ಪ ಕಡಗಂಚಿ, ಶಿವಪುತ್ರಪ್ಪ ಸಾಲಿ, ಸಿದ್ದಾರೂಡ ಕಂಬಾರ, ಅಂಬಣ್ಣಾ ಮಾಸ್ತರ್, ಶಿವಲಿಂಗಪ್ಪ ಪರೀಟ ಅವರಿಂದ ರಾತ್ರಿ ಹಂತಿ ಹಾಡುಗಳ ಗಾಯನ ಜರುಗಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>