ಅಧಿಕಾರಿಗಳ ಕಾರುಗಳು, ಜೀಪುಗಳು ಹೋಗದ ಕಡಿದಾದ ದಾರಿಯಲ್ಲಿ ಮಧ್ಯರಾತ್ರಿ ಒಂದು ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗಿ ಮರಳು ದಾಸ್ತಾನು ಮತ್ತು ಸಾಗಾಟ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. ಮರಳು ಸಾಗಾಟ ಮಾಡುವ ಐದು ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ. ಇನ್ನು ಕೆಲವು ಟ್ರ್ಯಾಕ್ಟರ್ ಕತ್ತಲಲ್ಲಿ ಮರೆಯಾದವು ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ತಿಳಿಸಿದ್ದಾರೆ.