ಕಲಬುರಗಿ: ಇಲ್ಲಿನ ಜೇವರ್ಗಿ ರಸ್ತೆಯ ಖಮಿತ್ಕರ್ ವ್ಯಾಪಾರ ಕೇಂದ್ರದ ಸಮೀಪದಲ್ಲಿ ಅ.8ರಂದು ಬೆಳಿಗ್ಗೆ 10.30ಕ್ಕೆ ಬೀರೇಶ್ವರ ಕೋ–ಆಪ್ ಕ್ರೆಡಿಟ್ ಸೊಸೈಟಿಯ 178ನೇ ಕಲಬುರಗಿ ನೂತನ ಶಾಖೆ ಉದ್ಘಾಟನೆ ನಡೆಯಲಿದೆ ಎಂದು ಸೊಸೈಟಿಯ ಜೇವರ್ಗಿ ಶಾಖೆಯ ಅಧ್ಯಕ್ಷ ಶಿವಣ್ಣಗೌಡ ಪಾಟೀಲ್ ತಿಳಿಸಿದರು.
ಕಲಬುರಗಿಯ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅವಿನಾಶ್ ಜಾಧವ, ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶರಣಬಸಪ್ಪ ಕಲ್ಲಾ, ಸಾಗರ ಸಂದಣಗಿ, ಬಾಪುರಾವ್ ಬಾಗಾ ಇದ್ದರು.