ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ನೃಪತುಂಗ ವಸತಿಗೃಹದ ಬಳಿ ಅಪಘಾತದಲ್ಲಿ ಗಾಯಗೊಂಡು ಸಂಕಟಪಡುತ್ತಿದ್ದ ಮುಳ್ಳು ಹಂದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ವಿ.ವಿ. ಆವರಣದಲ್ಲಿ ಬುಧವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಪೂಜಾ ಕಾಲೊನಿ ನಿವಾಸಿ ಭೀಮಸಿಂಗ ರಾಠೋಡ ಮುಳ್ಳುಹಂದಿಯ ಹಿಂಬದಿಯ ಕಾಲುಗಳಿಗೆ ಗಾಯವಾಗಿರುವುದನ್ನು ಗಮನಿಸಿ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಚವ್ಹಾಣ ಅವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮುಳ್ಳುಹಂದಿಯನ್ನು ರಕ್ಷಿಸಿ ಕರೆದೊಯ್ದರು.