‘ರೈತರ ಹೋಳು ಯಾರೂ ಕೇಳದಂತಾಗಿದೆ. ಸರ್ಕರ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ. ಕಣ್ಣು ಕಾಣಿಸುತ್ತಿಲ್ಲ. ಅತಿಯಾದ ಮಳೆಯಿಂದ ರೈತರು, ಕೂಲಿಕಾರ್ಮಿಕರು ತೊಂದರೆಯಲ್ಲಿದ್ದಾಗ ಬಿಜೆಪಿಯವರು ಜನ ಸ್ವರಾಜ್ ಯಾತ್ರೆ ಅರಂಭಿಸಿದ್ದಾರೆ. ಜನ, ಜಾನುವಾರು ಸಂಕಷ್ಟದಲ್ಲಿದ್ದಾಗ ಇಂತಹ ಯಾತ್ರೆ ಯಾರ ಹಿತಕ್ಕಾಗಿ. ಇದು ಜನ ಸ್ವರಾಜ್ ಯಾತ್ರೆಯಲ್ಲ. ಜನ ವಿರೋಧಿ ಯಾತ್ರೆ, ಮಳೆಯಿಂದ ತೊಗರಿ, ಹತ್ತಿ, ಜೋಳ, ಕಡಲೆ ಸಂಪೂರ್ಣ ಹಾಳಾಗಿವೆ. ಹೀಗಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಕಾಲ ಕಳೆಯುವ ಬದಲು ತ್ವರಿತವಾಗಿ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.