‘ಒಕ್ಕೂಟ ಸರ್ಕಾರ ಈ ಕುರಿತು ಕ್ರಮವಹಿಸದೇ ಇರುವುದರಿಂದ ಜಲವಿವಾದಗಳು ದೀರ್ಘ ಕಾಲದಿಂದ ಉಳಿದಿವೆ. ಇನ್ನೂ ಉದಾಸೀನ ಸಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಒತ್ತಡ ಹೇರುವಲ್ಲೂ ಉದಾಸೀನ ತೋರುವುದು ಜನವಿರೋಧಿ ನಿಲುವಾಗುತ್ತದೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಭಾಗವಾಗಿಯೇ ಇದು ಕಾಣಿಸುತ್ತದೆ. ಎಲ್ಲ ಸಾರ್ವಜನಿಕ ವಲಯದ ಕುಡಿಯುವ ಹಾಗೂ ನೀರಾವರಿ ಯೋಜನೆಗಳನ್ನು, ವಿದ್ಯುತ್ ಉತ್ಪಾದನೆಯನ್ನು ಖಾಸಗೀಕರಣಕ್ಕೆ ಒಳಪಡಿಸುವ ದುರುದ್ದೇಶ ಕೂಡ ಸರ್ಕಾರದ ಈ ಧೋರಣೆಯ ಹಿಂದಿದೆ’ ಎಂದೂ ದೂರಿದ್ದಾರೆ.