ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ|ಹೊಸ ರೂಪದ ಅರಿವು ಕೇಂದ್ರ: ತಲೆಎತ್ತುತ್ತಿವೆ 41 ಹೊಸ ವಿನ್ಯಾಸದ ಗ್ರಂಥಾಲಯ

Published : 3 ಡಿಸೆಂಬರ್ 2025, 23:30 IST
Last Updated : 3 ಡಿಸೆಂಬರ್ 2025, 23:30 IST
ಫಾಲೋ ಮಾಡಿ
Comments
ವೈಶಿಷ್ಟ್ಯವೇನು?:
‘ಸಣ್ಣ ಮೊಗಸಾಲೆ, ಗ್ರಂಥಪಾಲಕರ ಕೊಠಡಿ, ರೆಫರೆನ್ಸ್ ವಿಭಾಗ, ಕಾನ್ಫರೆನ್ಸ್‌ ಕೊಠಡಿ, ಬಲಬದಿಗೆ ಡಿಜಿಟಲ್‌ ಗ್ರಂಥಾಲಯ ಕೊಠಡಿ, ಹೊಸ ಪುಸ್ತಕಗಳು, ಪೀಠೋಪಕರಣಗಳು, ಶೌಚಾಲಯ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಸೌಲಭ್ಯ ಗಳನ್ನು ಹೊಸ ಬಗೆಯ ಅರಿವು ಕೇಂದ್ರಗಳು ಹೊಂದಿರಲಿವೆ’ ಎನ್ನುತ್ತಾರೆ ಅಧಿಕಾರಿಗಳು.
ಜಿ.ಪಂ., ತಾ.ಪಂ.ನಿಂದ 11:
ಇದರೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ₹2.75 ಕೋಟಿ ವೆಚ್ಚದಲ್ಲಿ ಇದೇ ಮಾದರಿಯ ಸಣ್ಣ ಪ್ರಮಾಣದ 11 ಅರಿವು ಕೇಂದ್ರಗಳು ಜಿಲ್ಲೆಯಲ್ಲಿ ನಿರ್ಮಾಣವಾಗಲಿವೆ. ತಲಾ ₹25 ಲಕ್ಷ ಅನುದಾನದಲ್ಲಿ ಈ ಅರಿವು ಕೇಂದ್ರಗಳು ರೂಪುಗೊಳ್ಳಲಿವೆ. ಇದರ ಟೆಂಡರ್‌ ಪ್ರಕ್ರಿಯೆ ಮುಗಿದ್ದು ಶೀಘ್ರವೇ ಕೆಲಸ ಶುರುವಾಗಲಿದೆ.
ಅರಿವು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಅನುವಾಗುವಂತೆ ಪುಸ್ತಕ, ಡಿಜಿಟಲ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 3 ಸಾವಿರ ಡೆಸ್ಕ್‌ಟಾಪ್‌ ಖರೀದಿಸಲಾಗಿದೆ
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ
‘ಪ್ಲಾಸ್ಟಿಕ್‌ ತ್ಯಾಜ್ಯ’ ಮರುಬಳಕೆ
‘ಕೆಕೆಆರ್‌ಡಿಬಿ ಅನುದಾನದಲ್ಲಿ ಕೆಆರ್‌ಐಡಿಎಲ್‌ನಿಂದ ನಿರ್ಮಿಸುತ್ತಿರುವ 30 ಅರಿವು ಕೇಂದ್ರಗಳಲ್ಲಿ 29 ಅರಿವು ಕೇಂದ್ರಗಳ ಕಟ್ಟಡ ಮರಳು, ಸಿಮೆಂಟ್‌, ಕಬ್ಬಿಣ, ಜಲ್ಲಿಕಲ್ಲಿನಲ್ಲಿ ನಿರ್ಮಾಣವಾಗಲಿವೆ. ಆದರೆ, ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿಯ ಅರಿವು ಕೇಂದ್ರ ಹೊಸ ಬಗೆಯಲ್ಲಿ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಿ ಬಳಸಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಒತ್ತಾಸೆಯೇ ಇದಕ್ಕೆ ಪ್ರೇರಣೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT