<p><strong>ಕಲಬುರಗಿ:</strong> ನಗರದ ಹಳೇ ಜೇವರ್ಗಿ ರಸ್ತೆಯ ಸತ್ಯಂ ಸ್ಕ್ಯಾನಿಂಗ್ ಸೆಂಟರ್ ಎದುರಿನ ಪಾಳು ಉದ್ಯಾನದಲ್ಲಿ ಮಂಗಳವಾರ ತಡರಾತ್ರಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.</p><p>ಹಮಾಲವಾಡಿ ಅಪ್ಪರ್ ಲೈನ್ ಪ್ರದೇಶದ ನಿವಾಸಿ ಸೈಯದ್ ಮೆಹಬೂಬ್ (23) ಕೊಲೆಯಾದ ಯುವಕ.</p><p>ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸಿಪಿ ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಇನ್ಸ್ಪೆಕ್ಟರ್ ಗುರು ಪಾಟೀಲ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.</p><p>ಶ್ವಾನ ದಳ ಹಾಗೂ ವಿಧಿವಿಜ್ಞಾನ ತಂಡಗಳ ಸಿಬ್ಬಂದಿ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆ ಹಾಕಿದವು.</p><p>ಈ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಕಮಿಷನರ್ ಶರಣಪ್ಪ ಎಸ್.ಡಿ., ‘ಜನರ ಓಡಾಟ ಇಲ್ಲದ ಉದ್ಯಾನದಲ್ಲಿ ಯುವಕನೊಬ್ಬನ ಕೊಲೆ ನಡೆದಿದೆ. ಕೆಲವು ದಿನಗಳ ಹಿಂದೆ ಸ್ನೇಹಿತರೊಂದಿಗೆ ಆತ ಗಲಾಟೆ ಮಾಡಿಕೊಂಡಿದ್ದ. ಅದೇ ವೈಷಮ್ಯದಿಂದ ಪರಿಚಯಸ್ಥರೇ ಹತ್ಯೆ ನಡೆಸಿದ ಕುರಿತು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ತನಿಖೆಯ ಬಳಿಕ ನಿಖರ ಕಾರಣ ಪತ್ತೆಯಾಲಿದೆ’ ಎಂದು ಪ್ರತಿಕ್ರಿಯಿಸಿದರು.</p><p>ಶಾಲಾ ದಾಖಲಾತಿ, ಬಿಸಿಯೂಟ ಪರಿಕರ ಕಳವು: ಹೊರವಲಯದ ತಾಜಸುಲ್ತಾನಪುರದ ಗೌತಮ ಪೂರ್ಣ ಗ್ರಾಮೀಣ ಅನುದಾನಿತ ಪ್ರೌಢ ಶಾಲೆಯ ಎಲ್ಲ ಏಳು ಕೊಠಡಿಗಳ ಕೀಲಿ ಒಡೆದ ಕಳ್ಳರು, ಬಿಸಿಯೂಟ ಪರಿಕರಗಳು, ಶಾಲಾ ದಾಖಲಾತಿಗಳು ಕದ್ದು ಪರಾರಿಯಾಗಿದ್ದಾರೆ.</p><p>‘ಜನವರಿ 17ರ ಮಧ್ಯಾಹ್ನದಿಂದ ಜ.18ರ ಮಧ್ಯಾಹ್ನದೊಳಗೆ ಈ ಕೃತ್ಯ ನಡೆದಿದೆ. ಕಳ್ಳರು ಶಾಲಾ ದಾಖಲಾತಿಗಳು, ಮೂರು ಎಲ್ಪಿಜಿ ಸಿಲಿಂಡರ್ಗಳು, ಮೂರು ಒಲೆ, ನಾಲ್ಕು ದೊಡ್ಡ–ನಾಲ್ಕು ಚಿಕ್ಕ ಬೋಗಣಿಗಳು, ತಲಾ ನಾಲ್ಕು ಬುಟ್ಟಿ, ಬಕೆಟುಗಳು, ಎರಡು ಡಬ್ಬಿಗಳು, ತಲಾ 200 ಪ್ಲೇಟ್– ಗ್ಲಾಸ್ಗಳು, ಒಂದು ಆ್ಯಂಪ್ಲಿಫೈರ್, ಎರಡು ಧ್ವನಿವರ್ಧಕಗಳು, ಐದು ಡೆಸ್ಕ್, 6 ಚಮಚ, ಎರಡು ಕುಕ್ಕರ್, ಎರಡು ಡ್ರಮ್ಸೆಟ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸೋಮನಾಥ ಇಂಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p><p>ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><blockquote>ಕೊಲೆಯಾದ ಸೈಯದ್ ಮೆಹಬೂಬ್ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬೈಕ್ ಕಳವಿಗೆ ಸಂಬಂಧಿಸಿದಂತೆ ಎರಡು ಹಳೆಯ ಪ್ರಕರಣಗಳಿವೆ </blockquote><span class="attribution">ಶರಣಪ್ಪ ಎಸ್.ಡಿ., ನಗರ ಪೊಲೀಸ್ ಕಮಿಷನರ್</span></div>.<h2>ನಾಲ್ವರು ಆರೋಪಿಗಳ ಬಂಧನ</h2><p>ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.</p><p>‘ಆನಂದ, ಆಶಿತೋಷ, ಶೋಯೆಬ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಹಳೇ ಜೇವರ್ಗಿ ರಸ್ತೆಯ ಸತ್ಯಂ ಸ್ಕ್ಯಾನಿಂಗ್ ಸೆಂಟರ್ ಎದುರಿನ ಪಾಳು ಉದ್ಯಾನದಲ್ಲಿ ಮಂಗಳವಾರ ತಡರಾತ್ರಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.</p><p>ಹಮಾಲವಾಡಿ ಅಪ್ಪರ್ ಲೈನ್ ಪ್ರದೇಶದ ನಿವಾಸಿ ಸೈಯದ್ ಮೆಹಬೂಬ್ (23) ಕೊಲೆಯಾದ ಯುವಕ.</p><p>ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸಿಪಿ ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಇನ್ಸ್ಪೆಕ್ಟರ್ ಗುರು ಪಾಟೀಲ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.</p><p>ಶ್ವಾನ ದಳ ಹಾಗೂ ವಿಧಿವಿಜ್ಞಾನ ತಂಡಗಳ ಸಿಬ್ಬಂದಿ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆ ಹಾಕಿದವು.</p><p>ಈ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಕಮಿಷನರ್ ಶರಣಪ್ಪ ಎಸ್.ಡಿ., ‘ಜನರ ಓಡಾಟ ಇಲ್ಲದ ಉದ್ಯಾನದಲ್ಲಿ ಯುವಕನೊಬ್ಬನ ಕೊಲೆ ನಡೆದಿದೆ. ಕೆಲವು ದಿನಗಳ ಹಿಂದೆ ಸ್ನೇಹಿತರೊಂದಿಗೆ ಆತ ಗಲಾಟೆ ಮಾಡಿಕೊಂಡಿದ್ದ. ಅದೇ ವೈಷಮ್ಯದಿಂದ ಪರಿಚಯಸ್ಥರೇ ಹತ್ಯೆ ನಡೆಸಿದ ಕುರಿತು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ತನಿಖೆಯ ಬಳಿಕ ನಿಖರ ಕಾರಣ ಪತ್ತೆಯಾಲಿದೆ’ ಎಂದು ಪ್ರತಿಕ್ರಿಯಿಸಿದರು.</p><p>ಶಾಲಾ ದಾಖಲಾತಿ, ಬಿಸಿಯೂಟ ಪರಿಕರ ಕಳವು: ಹೊರವಲಯದ ತಾಜಸುಲ್ತಾನಪುರದ ಗೌತಮ ಪೂರ್ಣ ಗ್ರಾಮೀಣ ಅನುದಾನಿತ ಪ್ರೌಢ ಶಾಲೆಯ ಎಲ್ಲ ಏಳು ಕೊಠಡಿಗಳ ಕೀಲಿ ಒಡೆದ ಕಳ್ಳರು, ಬಿಸಿಯೂಟ ಪರಿಕರಗಳು, ಶಾಲಾ ದಾಖಲಾತಿಗಳು ಕದ್ದು ಪರಾರಿಯಾಗಿದ್ದಾರೆ.</p><p>‘ಜನವರಿ 17ರ ಮಧ್ಯಾಹ್ನದಿಂದ ಜ.18ರ ಮಧ್ಯಾಹ್ನದೊಳಗೆ ಈ ಕೃತ್ಯ ನಡೆದಿದೆ. ಕಳ್ಳರು ಶಾಲಾ ದಾಖಲಾತಿಗಳು, ಮೂರು ಎಲ್ಪಿಜಿ ಸಿಲಿಂಡರ್ಗಳು, ಮೂರು ಒಲೆ, ನಾಲ್ಕು ದೊಡ್ಡ–ನಾಲ್ಕು ಚಿಕ್ಕ ಬೋಗಣಿಗಳು, ತಲಾ ನಾಲ್ಕು ಬುಟ್ಟಿ, ಬಕೆಟುಗಳು, ಎರಡು ಡಬ್ಬಿಗಳು, ತಲಾ 200 ಪ್ಲೇಟ್– ಗ್ಲಾಸ್ಗಳು, ಒಂದು ಆ್ಯಂಪ್ಲಿಫೈರ್, ಎರಡು ಧ್ವನಿವರ್ಧಕಗಳು, ಐದು ಡೆಸ್ಕ್, 6 ಚಮಚ, ಎರಡು ಕುಕ್ಕರ್, ಎರಡು ಡ್ರಮ್ಸೆಟ್ ಸೇರಿದಂತೆ ಹಲವು ವಸ್ತುಗಳನ್ನು ಕದ್ದಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸೋಮನಾಥ ಇಂಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.</p><p>ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><blockquote>ಕೊಲೆಯಾದ ಸೈಯದ್ ಮೆಹಬೂಬ್ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಬೈಕ್ ಕಳವಿಗೆ ಸಂಬಂಧಿಸಿದಂತೆ ಎರಡು ಹಳೆಯ ಪ್ರಕರಣಗಳಿವೆ </blockquote><span class="attribution">ಶರಣಪ್ಪ ಎಸ್.ಡಿ., ನಗರ ಪೊಲೀಸ್ ಕಮಿಷನರ್</span></div>.<h2>ನಾಲ್ವರು ಆರೋಪಿಗಳ ಬಂಧನ</h2><p>ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.</p><p>‘ಆನಂದ, ಆಶಿತೋಷ, ಶೋಯೆಬ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>