<p><strong>ಕಲಬುರಗಿ:</strong> ನಗರದ ಕುಸನೂರ ರಸ್ತೆಯ ಅಣ್ಣೆಮ್ಮ ದೇವಸ್ಥಾನದ ರಸ್ತೆಯಲ್ಲಿ ದಂಪತಿಯೊಬ್ಬರು ಮಾತನಾಡುತ್ತ ನಿಂತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.</p>.<p>ಕುಸನೂರು ರಸ್ತೆಯ ಕೃಷ್ಣ ನಗರದ ಡಾ.ಕೀರ್ತಿ ಹಾಲಗಾರ ಹಾಗೂ ಪ್ರಶಾಂತ ಕುಮಾರ ಹಾಲಗಾರ ಚಿನ್ನಾಭರಣ ಕಳೆದುಕೊಂಡ ದಂಪತಿ.</p>.<p>ಜಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ.ಕೀರ್ತಿ ಹಾಗೂ ಪ್ರಶಾಂತಕುಮಾರ ಅವರು ಸರಾಫ್ ಬಜಾರ್ನಲ್ಲಿ 298 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1 ಗ್ರಾಂ ಚಿನ್ನಾಭರಣ ಖರೀದಿಸಿ ಮನೆಯತ್ತ ಹೊರಟ್ಟಿದ್ದ ವೇಳೆ ಈ ಘಟನೆ ನಡೆದಿದೆ. ವ್ಯಾಟಿನಿ ಬ್ಯಾಗ್ನಲ್ಲಿ ಚಿನ್ನ–ಬೆಳ್ಳಿ ಆಭರಣಗಳಲ್ಲದೇ ವಿವೊ ಮೊಬೈಲ್ ಫೋನ್, ಸ್ಟೆತಸ್ಕೋಪ್, ₹3,500 ನಗದು ಇತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಡಾ.ಕೀರ್ತಿ ತಿಳಿಸಿದ್ದಾರೆ.</p>.<p>ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಇಸ್ಪೀಟ್ ಜೂಜಾಟ</p>.<p>ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಸೀಮಾಂತರ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಫರಹತಾಬಾದ್ ಪೊಲೀಸರು, ಒಟ್ಟು ₹18,900 ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಚಿನ್ನಾಭರಣ ನಗದು ಕಳವು</p>.<p>ಮದುವೆಯ ಆರತಕ್ಷತೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಸ್ಟೇರ್ಕೇಸ್ನ ಬಾಗಿಲು ಮುರಿದ ಕಳ್ಳರು, ಅಲ್ಮೇರಾದಲ್ಲಿದ್ದ 15 ಗ್ರಾಂ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಹಾಗೂ ₹61 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.</p>.<p>ಕಲಬುರಗಿಯ ಹೀರಾನಗರದ ನಿವಾಸಿ ಮೊಹಮ್ಮದ್ ತಾಹ್ ಇನಾಮದಾರ್ ಚಿನ್ನಾಭರಣ ಕಳೆದುಕೊಂಡವರು. </p>.<p>ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನದ ಕಿರೀಟ ಕಳವು!</strong></p>.<p>ಕಲಬುರಗಿಯ ಇಂದಿರಾ ನಗರದ ಸಂಜಯ ಸಿಂಗ್ ಎಂಬುವರ ಮನೆಯಲ್ಲಿದ್ದ ₹5.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ ಕಿರೀಟ ಹಾಗೂ ₹2 ಲಕ್ಷ ನಗದು ಕಳುವಾಗಿದೆ ಎಂದು ಸಂಜಯ್ ಅವರ ಮ್ಯಾನೇಜರ್ ರೇವಣಯ್ಯ ಮಠ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>‘ಸಂಜಯ್ ಅವರ ಮನೆಯಲ್ಲಿ ಎರಡು ವರ್ಷಗಳ ಕಾಲ ಹುಮನಾಬಾದ್ ಮೂಲದ ಬಸವರಾಜ ಎಂಬುವರು ವಾಚಮನ್ ಕೆಲಸ ಮಾಡುತ್ತಿದ್ದರು. 2025ರ ಸೆಪ್ಟೆಂಬರ್ 27ರಂದು ಕೆಲಸ ಬಿಟ್ಟು ಹೋಗಿದ್ದರು. ಹೋಗುವಾಗ ಚಿನ್ನಾಭರಣ, ನಗದು ಕದ್ದಿದ್ದಾರೆ. ಜನವರಿ 27ರಂದು ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಸ್ಟೇಷನ್ ಬಜಾರ್ ಠಾಣೆಗೆ ನೀಡಿದ ದೂರಿನಲ್ಲಿ ರೇವಣಯ್ಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಕುಸನೂರ ರಸ್ತೆಯ ಅಣ್ಣೆಮ್ಮ ದೇವಸ್ಥಾನದ ರಸ್ತೆಯಲ್ಲಿ ದಂಪತಿಯೊಬ್ಬರು ಮಾತನಾಡುತ್ತ ನಿಂತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.</p>.<p>ಕುಸನೂರು ರಸ್ತೆಯ ಕೃಷ್ಣ ನಗರದ ಡಾ.ಕೀರ್ತಿ ಹಾಲಗಾರ ಹಾಗೂ ಪ್ರಶಾಂತ ಕುಮಾರ ಹಾಲಗಾರ ಚಿನ್ನಾಭರಣ ಕಳೆದುಕೊಂಡ ದಂಪತಿ.</p>.<p>ಜಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ.ಕೀರ್ತಿ ಹಾಗೂ ಪ್ರಶಾಂತಕುಮಾರ ಅವರು ಸರಾಫ್ ಬಜಾರ್ನಲ್ಲಿ 298 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 1 ಗ್ರಾಂ ಚಿನ್ನಾಭರಣ ಖರೀದಿಸಿ ಮನೆಯತ್ತ ಹೊರಟ್ಟಿದ್ದ ವೇಳೆ ಈ ಘಟನೆ ನಡೆದಿದೆ. ವ್ಯಾಟಿನಿ ಬ್ಯಾಗ್ನಲ್ಲಿ ಚಿನ್ನ–ಬೆಳ್ಳಿ ಆಭರಣಗಳಲ್ಲದೇ ವಿವೊ ಮೊಬೈಲ್ ಫೋನ್, ಸ್ಟೆತಸ್ಕೋಪ್, ₹3,500 ನಗದು ಇತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಡಾ.ಕೀರ್ತಿ ತಿಳಿಸಿದ್ದಾರೆ.</p>.<p>ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಇಸ್ಪೀಟ್ ಜೂಜಾಟ</p>.<p>ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಕೆ) ಸೀಮಾಂತರ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಫರಹತಾಬಾದ್ ಪೊಲೀಸರು, ಒಟ್ಟು ₹18,900 ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಚಿನ್ನಾಭರಣ ನಗದು ಕಳವು</p>.<p>ಮದುವೆಯ ಆರತಕ್ಷತೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಸ್ಟೇರ್ಕೇಸ್ನ ಬಾಗಿಲು ಮುರಿದ ಕಳ್ಳರು, ಅಲ್ಮೇರಾದಲ್ಲಿದ್ದ 15 ಗ್ರಾಂ ಚಿನ್ನಾಭರಣ, 60 ಗ್ರಾಂ ಬೆಳ್ಳಿ ಹಾಗೂ ₹61 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.</p>.<p>ಕಲಬುರಗಿಯ ಹೀರಾನಗರದ ನಿವಾಸಿ ಮೊಹಮ್ಮದ್ ತಾಹ್ ಇನಾಮದಾರ್ ಚಿನ್ನಾಭರಣ ಕಳೆದುಕೊಂಡವರು. </p>.<p>ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನದ ಕಿರೀಟ ಕಳವು!</strong></p>.<p>ಕಲಬುರಗಿಯ ಇಂದಿರಾ ನಗರದ ಸಂಜಯ ಸಿಂಗ್ ಎಂಬುವರ ಮನೆಯಲ್ಲಿದ್ದ ₹5.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ ಕಿರೀಟ ಹಾಗೂ ₹2 ಲಕ್ಷ ನಗದು ಕಳುವಾಗಿದೆ ಎಂದು ಸಂಜಯ್ ಅವರ ಮ್ಯಾನೇಜರ್ ರೇವಣಯ್ಯ ಮಠ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>‘ಸಂಜಯ್ ಅವರ ಮನೆಯಲ್ಲಿ ಎರಡು ವರ್ಷಗಳ ಕಾಲ ಹುಮನಾಬಾದ್ ಮೂಲದ ಬಸವರಾಜ ಎಂಬುವರು ವಾಚಮನ್ ಕೆಲಸ ಮಾಡುತ್ತಿದ್ದರು. 2025ರ ಸೆಪ್ಟೆಂಬರ್ 27ರಂದು ಕೆಲಸ ಬಿಟ್ಟು ಹೋಗಿದ್ದರು. ಹೋಗುವಾಗ ಚಿನ್ನಾಭರಣ, ನಗದು ಕದ್ದಿದ್ದಾರೆ. ಜನವರಿ 27ರಂದು ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಸ್ಟೇಷನ್ ಬಜಾರ್ ಠಾಣೆಗೆ ನೀಡಿದ ದೂರಿನಲ್ಲಿ ರೇವಣಯ್ಯ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>