ಮೂರು ದಿನಗಳಿಂದ ಸಾಯಿಬಣ್ಣ, ಅವರ ಇಬ್ಬರು ಪುತ್ರಿಯರಾದ ಭೀಮಾಬಾಯಿ (24) ಮತ್ತು ಜಗದೇವಿಗೆ (22) ವಾಂತಿ ಭೇದಿ ಕಾಣಿಸಿಕೊಂಡಿತ್ತು. ಗುರುವಾರ ಡೊಂಗರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಭೀಮಾಬಾಯಿ ಮತ್ತು ಜಗದೇವಿ ಚೇತರಿಸಿಕೊಂಡು ಗುರುವಾರ ಮನೆಗೆ ತೆರಳಿದ್ದರು. ಸಾಯಿಬಣ್ಣ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.