<p><strong>ಕಲಬುರಗಿ</strong>: ಇಲ್ಲಿನ ಶಕ್ತಿನಗರದಲ್ಲಿ ಮದುವೆ ಅಂಗವಾಗಿ ಡಿಜೆ ಹಚ್ಚಿ ಸಂಭ್ರಮಿಸುವಾಗ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಇತ್ತೀಚೆಗೆ ಅರಿಸಿನ ಶಾಸ್ತ್ರ ಸಮಾರಂಭದಲ್ಲಿ ರಾಜಕೀಯ ಮುಖಂಡರೊಬ್ಬರು ಕೈಯಲ್ಲಿ ಪಿಸ್ತೂಲ್ ಹಿಡಿದು ಕುಣಿದ ರೀಲ್ಸ್ ಮಾಡಿದ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.</p>.<p>‘ಫೆಬ್ರುವರಿ 22ರಂದು ತುಷಾರ್ ಎಂಬ ಯುವಕನ ಮದುವೆ ಕಲಬುರಗಿಯ ಎಂ.ಜಿ. ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿತ್ತು. ಅಂದು ಸಂಜೆ ಶಕ್ತಿನಗರದ ಆತನ ಮನೆ ಹತ್ತಿರ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ‘ಮೈಂ ಹೂಂ ಡಾನ್’ ಹಾಡಿಗೆ ಸಂಜಯ್ ಹಾಗೂ ರಾಜವರ್ಧನ್ ಎಂಬುವವರು ಕೈಯಲ್ಲಿ ಹರಿತವಾದ ಚಾಕು ಮತ್ತು ತಲ್ವಾರ್ ಹಿಡಿದು ಸಾರ್ವಜನಿಕರಿಗೆ ಭಯ–ಭೀತಿ ಹುಟ್ಟಿಸುವ ರೀತಿಯಲ್ಲಿ ನೃತ್ಯ ಮಾಡಿದ್ದರು. ಇದಕ್ಕೆ ತುಷಾರ್ ಪ್ರಚೋದನೆ ಇತ್ತು’ ಎನ್ನಲಾಗಿದೆ.</p>.<p>ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಶೋಕನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.</p>.<p>ಬಸವನಗರದ ರಾಜವರ್ಧನ್ ಸಂಗವಾರ (31), ಸಂಜಯ ಗಾಯಕವಾಡ್ (23) ಹಾಗೂ ತುಷಾರ್ ಗಾಯಕವಾಡ್ (24) ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಇಲ್ಲಿನ ಶಕ್ತಿನಗರದಲ್ಲಿ ಮದುವೆ ಅಂಗವಾಗಿ ಡಿಜೆ ಹಚ್ಚಿ ಸಂಭ್ರಮಿಸುವಾಗ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಇತ್ತೀಚೆಗೆ ಅರಿಸಿನ ಶಾಸ್ತ್ರ ಸಮಾರಂಭದಲ್ಲಿ ರಾಜಕೀಯ ಮುಖಂಡರೊಬ್ಬರು ಕೈಯಲ್ಲಿ ಪಿಸ್ತೂಲ್ ಹಿಡಿದು ಕುಣಿದ ರೀಲ್ಸ್ ಮಾಡಿದ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.</p>.<p>‘ಫೆಬ್ರುವರಿ 22ರಂದು ತುಷಾರ್ ಎಂಬ ಯುವಕನ ಮದುವೆ ಕಲಬುರಗಿಯ ಎಂ.ಜಿ. ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದಿತ್ತು. ಅಂದು ಸಂಜೆ ಶಕ್ತಿನಗರದ ಆತನ ಮನೆ ಹತ್ತಿರ ಸಂಭ್ರಮಾಚರಣೆ ನಡೆಯುತ್ತಿತ್ತು. ಈ ವೇಳೆ ‘ಮೈಂ ಹೂಂ ಡಾನ್’ ಹಾಡಿಗೆ ಸಂಜಯ್ ಹಾಗೂ ರಾಜವರ್ಧನ್ ಎಂಬುವವರು ಕೈಯಲ್ಲಿ ಹರಿತವಾದ ಚಾಕು ಮತ್ತು ತಲ್ವಾರ್ ಹಿಡಿದು ಸಾರ್ವಜನಿಕರಿಗೆ ಭಯ–ಭೀತಿ ಹುಟ್ಟಿಸುವ ರೀತಿಯಲ್ಲಿ ನೃತ್ಯ ಮಾಡಿದ್ದರು. ಇದಕ್ಕೆ ತುಷಾರ್ ಪ್ರಚೋದನೆ ಇತ್ತು’ ಎನ್ನಲಾಗಿದೆ.</p>.<p>ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಶೋಕನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.</p>.<p>ಬಸವನಗರದ ರಾಜವರ್ಧನ್ ಸಂಗವಾರ (31), ಸಂಜಯ ಗಾಯಕವಾಡ್ (23) ಹಾಗೂ ತುಷಾರ್ ಗಾಯಕವಾಡ್ (24) ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>