‘ಕಲಬುರ್ಗಿ ಜಿಲ್ಲೆಯ ಕುರಕುಂಟಾ, ಶಹಾಬಾದ್ ಸುತ್ತಮುತ್ತ ಸುಣ್ಣದಕಲ್ಲು ಅಪಾರ ಪ್ರಮಾಣದಲ್ಲಿ ದೊರೆಯುತ್ತದೆ. ಈ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಆರ್ಥಿಕವಾಗಿ ಬೆಳೆಯಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ರೈಲ್ವೆ ಮಾರ್ಗ, ಹೆದ್ದಾರಿ, ಕಾರ್ಮಿಕರು ಹೀಗೆ ಎಲ್ಲ ಸೌಕರ್ಯಗಳೂ ಇಲ್ಲಿವೆ. ಆದ್ದರಿಂದ ಕುರಕುಂಟಾ ಸಿಮೆಂಟ್ ಕಾರ್ಖಾನೆಯನ್ನು ಶೀಘ್ರ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ಡಾ.ಜಾಧವ ಮನವಿ ಮಾಡಿದರು.