ಪ್ರಾಸ್ತಾವಿಕವಾಗಿ ಮಾತನಾಡಿದ ಬಳ್ಳಾರಿ ಕೇಂದ್ರ ಸಂವಹನ ಇಲಾಖೆ ಉಪ ನಿರ್ದೇಶಕ ಡಾ. ಜಿ.ಡಿ.ಹಳ್ಳಿಕೇರಿ, ‘ಕಲ್ಯಾಣ ಕರ್ನಾಟಕದ ಇತಿಹಾಸದ ಹಾಗೂ ಸ್ವಾತಂತ್ರ್ಯದ ಮಜುಲುಗಳ ಕುರಿತು ನಿಮ್ಮೆಲ್ಲರಿಗೂ ಅರಿವು ಮೂಡಿಸಬೇಕು ಎಂಬುದು ಕೇಂದ್ರದ ಆಸೆಯಾಗಿದೆ. ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಪ್ರದರ್ಶಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮಜುಲು, ಹಂತಗಳು ಕುರಿತಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಒಂದು ಸೆಲ್ಫಿ ಬೂತ್ ಇಡಲಾಗಿದ್ದು, ಅಲ್ಲಿ ಪೋಟೊ ತೆಗೆದುಕೊಂಡು ಟ್ವೀಟ್ ಮಾಡಿರಿ’ ಎಂದು ಮನವಿ ಮಾಡಿದರು.