ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಎಂಎಸ್ಐಎಲ್ ಹಾಗೂ ವೈನ್ಶಾಪ್, ಔಟ್ಲೆಟ್ಗಳನ್ನು ತೆರೆಯಲು ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಜಿಲ್ಲಾಧಿಕಾರಿ ಶರತ್ ಬಿ. ಅವರು ಎಲ್ಲ ಮಳಿಗೆಗಳಲ್ಲಿನ ಸ್ಟಾಕ್ ಪರಿಶೀಲಿಸಿ, ಸ್ಟಾಕ್ ಕಡಿಮೆಯಾಗಿದ್ದರ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದ್ದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ 30 ಎಂಎಸ್ಐಎಲ್ ಹಾಗೂ 121 ಔಟ್ಲೆಟ್ಗಳನ್ನು ಬಾಗಿಲುಗಳನ್ನು ತೆಗೆಸಿ ಸ್ಟಾಕ್ ಪರಿಶೀಲಿಸಿದರು. ಹೀಗಾಗಿ, ಬೆಳಿಗ್ಗೆ 9ಕ್ಕೆ ಆರಂಭವಾಗಬೇಕಿದ್ದ ಮದ್ಯದಂಗಡಿಗಳು ಮಧ್ಯಾಹ್ನ 2ರ ಬಳಿಕ ಆರಂಭವಾದವು.