<p><strong>ವಾಡಿ:</strong> ಅತ್ಯಂತ ಕಡಿಮೆ ಜಾಗದಲ್ಲಿ ವೇಗವಾಗಿ, ದಟ್ಟವಾಗಿ ಸೃಷ್ಟಿಯಾಗುವ ಮಿಯಾವಾಕಿ ಅರಣ್ಯ, ಚಿಟ್ಟೆ ಪಾರ್ಕ್, ಗ್ರಂಥಾಲಯ, ಕೃತಕ ಜಲಪಾತ, ಮರದ ಸೇತುವೆ, ವಾಯುವಿಹಾರ, ಮಕ್ಕಳ ಮನೋರಂಜನೆಗೆಂದು ತರಹೇವಾರಿ ಕ್ರೀಡಾ ಪರಿಕರಗಳು...</p>.<p>ಇವು ಅರಣ್ಯ ಇಲಾಖೆಯಿಂದ 13.81 ಹೆಕ್ಟೇರ್ ಪ್ರದೇಶದಲ್ಲಿ ಕಲಬುರಗಿ ಸೇಡಂ ರಾಷ್ಟ್ರೀಯ ಹೆದ್ದಾರಿ ಗುಂಡುಗುರ್ತಿ ಹತ್ತಿರ ನಿರ್ಮಿಸಿರುವ ಲುಂಬಿನಿ ಉದ್ಯಾನ ಪ್ರಮುಖ ಆಕರ್ಷಣೆಗಳು.</p>.<p>ಚಿತ್ತಾಪುರ ತಾಲ್ಲೂಕಿನ ನೂರಾರು ಶಾಲೆಯ ವಿದ್ಯಾರ್ಥಿಗಳ ಮನೋರಂಜನೆ ಜತೆಗೆ ವೈಜ್ಞಾನಿಕ ಜ್ಞಾನಾರ್ಜನೆಗೆ ನಿರ್ಮಿಸಲಾಗುತ್ತಿರುವ ಲುಂಬಿನಿ ಉದ್ಯಾನ ಹಲವು ವಿಶಿಷ್ಟತೆಯಿಂದ ಗಮನ ಸೆಳೆಯುವಂತೆ ರೂಪುಗೊಂಡಿದೆ. ಉದ್ದೇಶಿತ ಪ್ರಾಣಿ ಸಂಗ್ರಹಾಲಯದ ಹತ್ತಿರ ನಿರ್ಮಿಸಿರುವ ಉದ್ಯಾನವನ್ನು ಜ.26ರಂದು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.</p>.<p>ಅರಣ್ಯ ಇಲಾಖೆಯ ₹50 ಲಕ್ಷ ಹಾಗೂ ಡಿಎಂಎಫ್ ಫಂಡ್ನ ₹1 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಚಿತ್ತಾಪುರ ತಾಲ್ಲೂಕು ಪ್ರವಾಸಿ ತಾಣವನ್ನಾಗಿಸಲು ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ನಿರ್ಮಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.</p>.<p><strong>ಚಿಟ್ಟೆ ಪಾರ್ಕ್:</strong> ಚಿಟ್ಟೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಚಿಟ್ಟೆ ಪಾರ್ಕ್ ನಿರ್ಮಿಸಲಾಗಿದೆ. ಒಟ್ಟು 51 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಅವು ಇಲ್ಲಿಯೇ ಉಳಿದುಕೊಳ್ಳಲು ಅವಶ್ಯಕವಾದ ಮರಗಿಡಗಳು ಹಾಗೂ ಹೂವಿನ ಗಿಡಗಳನ್ನು ಹಾಕಲಾಗಿದ್ದು ಕಾಯಂ ಅವಾಸಸ್ಥಾನವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಮಿಯಾವಾಕಿ ಮಾದರಿ:</strong> ಜಪಾನ್ ಮಾದರಿಯ ಮಿಯಾವಾಕಿ ಮಾದರಿ ಅರಣ್ಯ ಗುಂಡುಗುರ್ತಿ ಲುಂಬಿನಿ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿದೆ. ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯ ಬೆಳೆಸುವುದು. ಆ ಮೂಲಕ ಸಾರ್ವಜನಿಕರಿಗೆ ಅರಣ್ಯದ ಲಾಭಗಳ ಕುರಿತು ಪ್ರಾತ್ಯಕ್ಷಿಕೆ ತೋರಿಸುವುದು ಯೋಜನೆ ಉದ್ದೇಶವಾಗಿದೆ.</p>.<p><strong>ಅಂಫಿ ಥಿಯೇಟರ್:</strong> 150 ಜನರು ಕುಳಿತುಕೊಂಡು ಥಿಯೇಟರ್ನಲ್ಲಿ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಜ್ಞಾನಕ್ಕೆ ಇದು ಅನುಕೂಲವಾಗಲಿದೆ.</p>.<p>ಪ್ರಾಣಿ ಸಂಗ್ರಹಾಲಯ ಸಿದ್ಧಗೊಂಡಿದ್ದು, ಎರಡ್ಮೂರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ಒಂದಕ್ಕೊಂದು ಪೂರಕವಾಗಿರಲಿವೆ. ಪ್ರಾಣಿ ಸಂಗ್ರಹಾಲಯದ ಕಾಮಗಾರಿ ಭರದಿಂದ ಸಾಗಿದೆ.</p>.<div><blockquote>ಹೆದ್ದಾರಿಗೆ ಹೊಂದಿಕೊಂಡು ಉದ್ಯಾನ ಪ್ರಾಣಿ ಸಂಗ್ರಹಾಲಯ ನಿರ್ಮಿಸುವುದರಿಂದ ವ್ಯಾಪಾರ ವಹಿವಾಟಿನಂತಹ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಹಲವರಿಗೆ ಉದ್ಯೋಗ ಸಿಗಲಿದೆ </blockquote><span class="attribution">-ಪ್ರಿಯಾಂಕ್ ಖರ್ಗೆ, ಸಚಿವ</span></div>.<div><blockquote>1500 ವಿವಿಧ ಬಗೆಯ ಗಿಡಗಳು ಹಾಗೂ 4000ಕ್ಕೂ ಹೆಚ್ಚು ವಿವಿಧ ಹೂವಿನ ಗಿಡಗಳನ್ನು ಹಾಕುವ ಉದ್ದೇಶವಿದೆ. ಇದೊಂದು ಪ್ರವಾಸಿ ಹಾಗೂ ಅಧ್ಯಯನ ತಾಣವಾಗಲಿದೆ</blockquote><span class="attribution">- ಸುಮಿತ್ ಕುಮಾರ, ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಕಲಬುರಗಿ</span></div>.<div><blockquote>ಚಿತ್ತಾಪುರ ಚಿಂಚೋಳಿ ಸೇಡಂ ಸಹಿತ ಜಿಲ್ಲೆಯ ವಿವಿಧೆಡೆಯಿಂದ ಉದ್ಯಾನ ಪ್ರಾಣಿ ಸಂಗ್ರಹಾಲಯ ವೀಕ್ಷಿಸಲು ಜನರು ಬರುವ ನಿಟ್ಟಿನಲ್ಲಿ ಆಕರ್ಷಣೀಯಗೊಳಿಸಲಾಗುತ್ತಿದೆ </blockquote><span class="attribution">-ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ ಚಿತ್ತಾಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಅತ್ಯಂತ ಕಡಿಮೆ ಜಾಗದಲ್ಲಿ ವೇಗವಾಗಿ, ದಟ್ಟವಾಗಿ ಸೃಷ್ಟಿಯಾಗುವ ಮಿಯಾವಾಕಿ ಅರಣ್ಯ, ಚಿಟ್ಟೆ ಪಾರ್ಕ್, ಗ್ರಂಥಾಲಯ, ಕೃತಕ ಜಲಪಾತ, ಮರದ ಸೇತುವೆ, ವಾಯುವಿಹಾರ, ಮಕ್ಕಳ ಮನೋರಂಜನೆಗೆಂದು ತರಹೇವಾರಿ ಕ್ರೀಡಾ ಪರಿಕರಗಳು...</p>.<p>ಇವು ಅರಣ್ಯ ಇಲಾಖೆಯಿಂದ 13.81 ಹೆಕ್ಟೇರ್ ಪ್ರದೇಶದಲ್ಲಿ ಕಲಬುರಗಿ ಸೇಡಂ ರಾಷ್ಟ್ರೀಯ ಹೆದ್ದಾರಿ ಗುಂಡುಗುರ್ತಿ ಹತ್ತಿರ ನಿರ್ಮಿಸಿರುವ ಲುಂಬಿನಿ ಉದ್ಯಾನ ಪ್ರಮುಖ ಆಕರ್ಷಣೆಗಳು.</p>.<p>ಚಿತ್ತಾಪುರ ತಾಲ್ಲೂಕಿನ ನೂರಾರು ಶಾಲೆಯ ವಿದ್ಯಾರ್ಥಿಗಳ ಮನೋರಂಜನೆ ಜತೆಗೆ ವೈಜ್ಞಾನಿಕ ಜ್ಞಾನಾರ್ಜನೆಗೆ ನಿರ್ಮಿಸಲಾಗುತ್ತಿರುವ ಲುಂಬಿನಿ ಉದ್ಯಾನ ಹಲವು ವಿಶಿಷ್ಟತೆಯಿಂದ ಗಮನ ಸೆಳೆಯುವಂತೆ ರೂಪುಗೊಂಡಿದೆ. ಉದ್ದೇಶಿತ ಪ್ರಾಣಿ ಸಂಗ್ರಹಾಲಯದ ಹತ್ತಿರ ನಿರ್ಮಿಸಿರುವ ಉದ್ಯಾನವನ್ನು ಜ.26ರಂದು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.</p>.<p>ಅರಣ್ಯ ಇಲಾಖೆಯ ₹50 ಲಕ್ಷ ಹಾಗೂ ಡಿಎಂಎಫ್ ಫಂಡ್ನ ₹1 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಚಿತ್ತಾಪುರ ತಾಲ್ಲೂಕು ಪ್ರವಾಸಿ ತಾಣವನ್ನಾಗಿಸಲು ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ನಿರ್ಮಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.</p>.<p><strong>ಚಿಟ್ಟೆ ಪಾರ್ಕ್:</strong> ಚಿಟ್ಟೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಚಿಟ್ಟೆ ಪಾರ್ಕ್ ನಿರ್ಮಿಸಲಾಗಿದೆ. ಒಟ್ಟು 51 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಅವು ಇಲ್ಲಿಯೇ ಉಳಿದುಕೊಳ್ಳಲು ಅವಶ್ಯಕವಾದ ಮರಗಿಡಗಳು ಹಾಗೂ ಹೂವಿನ ಗಿಡಗಳನ್ನು ಹಾಕಲಾಗಿದ್ದು ಕಾಯಂ ಅವಾಸಸ್ಥಾನವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಮಿಯಾವಾಕಿ ಮಾದರಿ:</strong> ಜಪಾನ್ ಮಾದರಿಯ ಮಿಯಾವಾಕಿ ಮಾದರಿ ಅರಣ್ಯ ಗುಂಡುಗುರ್ತಿ ಲುಂಬಿನಿ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿದೆ. ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯ ಬೆಳೆಸುವುದು. ಆ ಮೂಲಕ ಸಾರ್ವಜನಿಕರಿಗೆ ಅರಣ್ಯದ ಲಾಭಗಳ ಕುರಿತು ಪ್ರಾತ್ಯಕ್ಷಿಕೆ ತೋರಿಸುವುದು ಯೋಜನೆ ಉದ್ದೇಶವಾಗಿದೆ.</p>.<p><strong>ಅಂಫಿ ಥಿಯೇಟರ್:</strong> 150 ಜನರು ಕುಳಿತುಕೊಂಡು ಥಿಯೇಟರ್ನಲ್ಲಿ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಜ್ಞಾನಕ್ಕೆ ಇದು ಅನುಕೂಲವಾಗಲಿದೆ.</p>.<p>ಪ್ರಾಣಿ ಸಂಗ್ರಹಾಲಯ ಸಿದ್ಧಗೊಂಡಿದ್ದು, ಎರಡ್ಮೂರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ಒಂದಕ್ಕೊಂದು ಪೂರಕವಾಗಿರಲಿವೆ. ಪ್ರಾಣಿ ಸಂಗ್ರಹಾಲಯದ ಕಾಮಗಾರಿ ಭರದಿಂದ ಸಾಗಿದೆ.</p>.<div><blockquote>ಹೆದ್ದಾರಿಗೆ ಹೊಂದಿಕೊಂಡು ಉದ್ಯಾನ ಪ್ರಾಣಿ ಸಂಗ್ರಹಾಲಯ ನಿರ್ಮಿಸುವುದರಿಂದ ವ್ಯಾಪಾರ ವಹಿವಾಟಿನಂತಹ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಹಲವರಿಗೆ ಉದ್ಯೋಗ ಸಿಗಲಿದೆ </blockquote><span class="attribution">-ಪ್ರಿಯಾಂಕ್ ಖರ್ಗೆ, ಸಚಿವ</span></div>.<div><blockquote>1500 ವಿವಿಧ ಬಗೆಯ ಗಿಡಗಳು ಹಾಗೂ 4000ಕ್ಕೂ ಹೆಚ್ಚು ವಿವಿಧ ಹೂವಿನ ಗಿಡಗಳನ್ನು ಹಾಕುವ ಉದ್ದೇಶವಿದೆ. ಇದೊಂದು ಪ್ರವಾಸಿ ಹಾಗೂ ಅಧ್ಯಯನ ತಾಣವಾಗಲಿದೆ</blockquote><span class="attribution">- ಸುಮಿತ್ ಕುಮಾರ, ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಕಲಬುರಗಿ</span></div>.<div><blockquote>ಚಿತ್ತಾಪುರ ಚಿಂಚೋಳಿ ಸೇಡಂ ಸಹಿತ ಜಿಲ್ಲೆಯ ವಿವಿಧೆಡೆಯಿಂದ ಉದ್ಯಾನ ಪ್ರಾಣಿ ಸಂಗ್ರಹಾಲಯ ವೀಕ್ಷಿಸಲು ಜನರು ಬರುವ ನಿಟ್ಟಿನಲ್ಲಿ ಆಕರ್ಷಣೀಯಗೊಳಿಸಲಾಗುತ್ತಿದೆ </blockquote><span class="attribution">-ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ ಚಿತ್ತಾಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>