ಇಲ್ಲಿನ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ಭಾನುವಾರ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಸಂವಿಧಾನ ರಚಿಸಿದ ಮಹಾ ಮೇಧಾವಿ ಅಂಬೇಡ್ಕರ್. ಅವರು ಕಟ್ಟಿಕೊಟ್ಟ ಈ ಸಂವಿಧಾನ ವಿಭಿನ್ನ ಮತಗಳ, ಅಸಂಖ್ಯಾತ ಜಾತಿಗಳ, ಲೆಕ್ಕವಿಲ್ಲದಷ್ಟು ಭಾಷೆಗಳ, ವಿಶೇಷ ಸಾಂಸ್ಕೃತಿಕ ವಿಸ್ಮಯಕಾರಿ ಆಚರಣೆಗಳ ಈ ದೇಶವನ್ನು ಒಂದು ಜಾತ್ಯತೀತ ರಾಷ್ಟ್ರವನ್ನಾಗಿ ಕಟ್ಟಲು ಸಾಧ್ಯವಾಯಿತು. ಬಂದಿಖಾನೆಯಲ್ಲಿರುವ ಕೈದಿಗಳು ಸಹೋದರತ್ವ ಭಾವನೆಯಿಂದ ಒಟ್ಟಾರೆ ಜಾತಿ ರಹಿತವಾಗಿ ಬಾಳಬೇಕು’ ಎಂದರು.