‘ಕಾರ್ಯದ ನಿಮಿತ್ತ ಕಮಲಾಪುರಕ್ಕೆ ಬಂದಿದ್ದ ಸಾಯಿಬಣ್ಣ ಅವರು ಮನೆಗೆ ಮರಳಲು ರಸ್ತೆ ದಾಟುತ್ತಿದ್ದರು. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಹಿಂಬದಿ ಚಲಿಸುತ್ತಿದ್ದ ರೋಡ್ ರೋಲರ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಹಿಂಬದಿಯಲ್ಲಿ ವ್ಯಕ್ತಿ ಇರುವುದಾಗಿ ಎಷ್ಟೇ ಕೂಗಿಕೊಂಡರೂ ರೋಲರ್ ಚಾಲಕ ಕಿವಿಗೊಡಲಿಲ್ಲ’ ಎಂದು ಪ್ರತ್ಯಕ್ಷರ್ಶಿಗಳು ಆರೋಪಿಸಿದ್ದಾರೆ.