<p><strong>ಕಾಳಗಿ:</strong> ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಈಗಿನ ಕಾಲದಲ್ಲಿ ತಾಲ್ಲೂಕಿನ ಮಂಗಲಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮುಕ್ತ ವಾತಾವರಣದ ಜ್ಞಾನ ದೇಗುಲವಾಗಿದೆ.</p>.<p>77 ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಪ್ರಸ್ತುತ ಎಲ್ಕೆಜಿಯಿಂದ 8ನೇ ತರಗತಿಯನ್ನು ಹೊಂದಿದ್ದು, 175 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಊರಿಂದ 2 ಕಿ.ಮೀ ದೂರವಿರುವ ಶಾಲೆ ವಿಶಾಲವಾದ ಮೈದಾನದಲ್ಲಿ ಭೌತಿಕ ಪರಿಸರ, ಆಂತರಿಕ ಶಿಕ್ಷಣದಿಂದ ನೋಡುಗರನ್ನು ಕೈ ಮಾಡಿ ಕರೆಯುತ್ತಿದೆ.</p>.<p>2023-24ನೇ ಸಾಲಿನಲ್ಲಿ ಪಿ.ಎಂ.ಶ್ರೀ ಯೋಜನೆಗೆ ಒಳಗಾದ ಶಾಲೆ ಗುಣಾತ್ಮಕ ಮತ್ತು ಸಮಗ್ರ ಶಿಕ್ಷಣದಿಂದ ಹೆಸರಾಗಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಎನ್ನುತ್ತಾರೆ ಪೋಷಕರು.</p>.<p>ಮಕ್ಕಳ ನೆರವಿನಿಂದ ಶಾಲಾ ಆವರಣದಲ್ಲಿ ಕೈತೋಟ ಕಂಗೊಳಿಸುತ್ತಿದೆ. ಮಗುವಿಗೊಂದು ಗಿಡ ಶಾಲೆಗೊಂದು ವನ ಎಂಬಂತೆ ಬೇವು, ಸಾಗವಾನಿ, ಬಾದಾಮಿ, ತೆಂಗು, ದಾಳಿಂಬೆ, ನೇರಳೆ, ಹೊಂಗೆ, ತಪಸಿ, ಗುಲ್ಮೊಹರ್ ಹೀಗೆ 400 ಗಿಡ-ಮರಗಳ ಹಸಿರಿನ ಶಾಲಾವನ ಮಕ್ಕಳ ಸಂತಸವನ್ನು ಹೆಚ್ಚಿಸಿದೆ.</p>.<p>ಹೀಗೆ ಹೂವು, ತರಕಾರಿ, ಔಷಧಿಯ ಹಸಿರು ಬಳ್ಳಿ ಮಕ್ಕಳಿಂದ ಅರಳುವ ವಾತಾವರಣ ಇಲ್ಲಿದೆ. ವರ್ಷದ 12 ತಿಂಗಳು ಶಾಲಾವನದ ನಿರ್ವಹಣೆಯನ್ನು ಮಕ್ಕಳೇ ಮಾಡುತ್ತಿರುವುದು ವಿಶೇಷವಾಗಿದೆ. ಹಸಿಕಸ, ಒಣಕಸ, ಪರಿಸರ ಸಂರಕ್ಷಣೆ, ಶುದ್ಧಗಾಳಿ, ತಂಪಾದ ನೆರಳಿನ ಕಲ್ಪನೆ ಮಕ್ಕಳಿಗೆ ಕರಗತವಾಗಿದೆ.</p>.<p>ಇನ್ನೂ ಈ ಶಾಲೆಯ ಮಕ್ಕಳು ದೈಹಿಕ ಶಿಕ್ಷಣದ ಶಿಕ್ಷಕ ಇಲ್ಲದಿದ್ದರೂ ಥ್ರೋಬಾಲ್ ಸ್ಪರ್ಧೆಯಲ್ಲಿ 12 ಬಾರಿ ತಾಲ್ಲೂಕಿಗೆ, 2 ಬಾರಿ ಜಿಲ್ಲೆಗೆ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಲೋಕ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಶಿಕ್ಷಣ ಕೊಠಡಿಯ ನಿರ್ವಹಣೆ ಸ್ವತಃ ಮಕ್ಕಳೇ ಮಾಡುತ್ತಾರೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.</p>.<p>ಒಟ್ಟಾರೆ, ಕನ್ನಡ ಮಾಧ್ಯಮ ಶಾಲೆ ಮತ್ತು ಹಳ್ಳಿ ಮಕ್ಕಳೆಂದರೆ ವಕ್ರದೃಷ್ಟಿಯಿಂದ ನೋಡುವ ಸದ್ಯದ ಪರಿಸ್ಥಿತಿಯಲ್ಲಿ ಈ ಶಾಲಾ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಮಕ್ಕಳೇ ಗುರುತರ ಜವಾಬ್ದಾರಿ ಹೊತ್ತಿರುವುದು ಮರೆಯುವಂತಿಲ್ಲ.</p>.<div><blockquote>ಇಲ್ಲಿ ಮಕ್ಕಳಲ್ಲಿ ಹುಮ್ಮಸ್ಸು ಬಹಳಷ್ಟಿದೆ. ಊರಿನ ಜನರ ಸಹಕಾರವೂ ಚೆನ್ನಾಗಿದೆ. ಈ ಎಲ್ಲರ ಪರಿಶ್ರಮದಿಂದ ಶಾಲೆ ನೋಡುವಂತಾಗಿದೆ.</blockquote><span class="attribution">ಸಂತೋಷ ಮುಖ್ಯಶಿಕ್ಷಕ</span></div>.<div><blockquote>ಮಕ್ಕಳೇ ಸ್ಪಂದಿಸದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಇಲ್ಲ ಮಕ್ಕಳು ವಿಭಿನ್ನವಾಗಿದ್ದು, ಶಾಲೆಯ ಕೆಲಸಕ್ಕೆ ನಾಮುಂದು, ತಾಮುಂದು ಎನ್ನುತ್ತಾರೆ. </blockquote><span class="attribution">ಸುರೇಶ ಮಡಿವಾಳ, ಶಿಕ್ಷಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಈಗಿನ ಕಾಲದಲ್ಲಿ ತಾಲ್ಲೂಕಿನ ಮಂಗಲಗಿ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಮುಕ್ತ ವಾತಾವರಣದ ಜ್ಞಾನ ದೇಗುಲವಾಗಿದೆ.</p>.<p>77 ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಪ್ರಸ್ತುತ ಎಲ್ಕೆಜಿಯಿಂದ 8ನೇ ತರಗತಿಯನ್ನು ಹೊಂದಿದ್ದು, 175 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಊರಿಂದ 2 ಕಿ.ಮೀ ದೂರವಿರುವ ಶಾಲೆ ವಿಶಾಲವಾದ ಮೈದಾನದಲ್ಲಿ ಭೌತಿಕ ಪರಿಸರ, ಆಂತರಿಕ ಶಿಕ್ಷಣದಿಂದ ನೋಡುಗರನ್ನು ಕೈ ಮಾಡಿ ಕರೆಯುತ್ತಿದೆ.</p>.<p>2023-24ನೇ ಸಾಲಿನಲ್ಲಿ ಪಿ.ಎಂ.ಶ್ರೀ ಯೋಜನೆಗೆ ಒಳಗಾದ ಶಾಲೆ ಗುಣಾತ್ಮಕ ಮತ್ತು ಸಮಗ್ರ ಶಿಕ್ಷಣದಿಂದ ಹೆಸರಾಗಿ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ ಎನ್ನುತ್ತಾರೆ ಪೋಷಕರು.</p>.<p>ಮಕ್ಕಳ ನೆರವಿನಿಂದ ಶಾಲಾ ಆವರಣದಲ್ಲಿ ಕೈತೋಟ ಕಂಗೊಳಿಸುತ್ತಿದೆ. ಮಗುವಿಗೊಂದು ಗಿಡ ಶಾಲೆಗೊಂದು ವನ ಎಂಬಂತೆ ಬೇವು, ಸಾಗವಾನಿ, ಬಾದಾಮಿ, ತೆಂಗು, ದಾಳಿಂಬೆ, ನೇರಳೆ, ಹೊಂಗೆ, ತಪಸಿ, ಗುಲ್ಮೊಹರ್ ಹೀಗೆ 400 ಗಿಡ-ಮರಗಳ ಹಸಿರಿನ ಶಾಲಾವನ ಮಕ್ಕಳ ಸಂತಸವನ್ನು ಹೆಚ್ಚಿಸಿದೆ.</p>.<p>ಹೀಗೆ ಹೂವು, ತರಕಾರಿ, ಔಷಧಿಯ ಹಸಿರು ಬಳ್ಳಿ ಮಕ್ಕಳಿಂದ ಅರಳುವ ವಾತಾವರಣ ಇಲ್ಲಿದೆ. ವರ್ಷದ 12 ತಿಂಗಳು ಶಾಲಾವನದ ನಿರ್ವಹಣೆಯನ್ನು ಮಕ್ಕಳೇ ಮಾಡುತ್ತಿರುವುದು ವಿಶೇಷವಾಗಿದೆ. ಹಸಿಕಸ, ಒಣಕಸ, ಪರಿಸರ ಸಂರಕ್ಷಣೆ, ಶುದ್ಧಗಾಳಿ, ತಂಪಾದ ನೆರಳಿನ ಕಲ್ಪನೆ ಮಕ್ಕಳಿಗೆ ಕರಗತವಾಗಿದೆ.</p>.<p>ಇನ್ನೂ ಈ ಶಾಲೆಯ ಮಕ್ಕಳು ದೈಹಿಕ ಶಿಕ್ಷಣದ ಶಿಕ್ಷಕ ಇಲ್ಲದಿದ್ದರೂ ಥ್ರೋಬಾಲ್ ಸ್ಪರ್ಧೆಯಲ್ಲಿ 12 ಬಾರಿ ತಾಲ್ಲೂಕಿಗೆ, 2 ಬಾರಿ ಜಿಲ್ಲೆಗೆ ಮತ್ತು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಲೋಕ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಶಿಕ್ಷಣ ಕೊಠಡಿಯ ನಿರ್ವಹಣೆ ಸ್ವತಃ ಮಕ್ಕಳೇ ಮಾಡುತ್ತಾರೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.</p>.<p>ಒಟ್ಟಾರೆ, ಕನ್ನಡ ಮಾಧ್ಯಮ ಶಾಲೆ ಮತ್ತು ಹಳ್ಳಿ ಮಕ್ಕಳೆಂದರೆ ವಕ್ರದೃಷ್ಟಿಯಿಂದ ನೋಡುವ ಸದ್ಯದ ಪರಿಸ್ಥಿತಿಯಲ್ಲಿ ಈ ಶಾಲಾ ಬೆಳವಣಿಗೆಯ ಪ್ರತಿ ಹೆಜ್ಜೆಯಲ್ಲಿ ಮಕ್ಕಳೇ ಗುರುತರ ಜವಾಬ್ದಾರಿ ಹೊತ್ತಿರುವುದು ಮರೆಯುವಂತಿಲ್ಲ.</p>.<div><blockquote>ಇಲ್ಲಿ ಮಕ್ಕಳಲ್ಲಿ ಹುಮ್ಮಸ್ಸು ಬಹಳಷ್ಟಿದೆ. ಊರಿನ ಜನರ ಸಹಕಾರವೂ ಚೆನ್ನಾಗಿದೆ. ಈ ಎಲ್ಲರ ಪರಿಶ್ರಮದಿಂದ ಶಾಲೆ ನೋಡುವಂತಾಗಿದೆ.</blockquote><span class="attribution">ಸಂತೋಷ ಮುಖ್ಯಶಿಕ್ಷಕ</span></div>.<div><blockquote>ಮಕ್ಕಳೇ ಸ್ಪಂದಿಸದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಇಲ್ಲ ಮಕ್ಕಳು ವಿಭಿನ್ನವಾಗಿದ್ದು, ಶಾಲೆಯ ಕೆಲಸಕ್ಕೆ ನಾಮುಂದು, ತಾಮುಂದು ಎನ್ನುತ್ತಾರೆ. </blockquote><span class="attribution">ಸುರೇಶ ಮಡಿವಾಳ, ಶಿಕ್ಷಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>