ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ಸಲಹೆ

Last Updated 11 ಜುಲೈ 2021, 15:01 IST
ಅಕ್ಷರ ಗಾತ್ರ

ಜೇವರ್ಗಿ: ‘ತಾಲ್ಲೂಕಿನ ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆದುಕೊಳ್ಳಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಟಾಫೆ ಕಂಪನಿಯ ಮ್ಯಾಸ್ಸೀ ಫರ್ಗೂಸನ್ ಟ್ರ್ಯಾಕ್ಟರ್ ಶೋರೂಮ್‌ ಉದ್ಘಾಟಿಸಿ ಮಾತನಾಡಿದ ಅವರು, ‘ರೈತರ ಬೆನ್ನೆಲುಬು ಎನಿಸಿಕೊಂಡಿರುವ ಎತ್ತುಗಳೊಂದಿಗೆ ಟ್ರಾಕ್ಟರ್‌ಗಳನ್ನೂ ಬಳಸಬೇಕು’ ಎಂದರು.

ದಾನೇಶ್ವರಿ ಟ್ರ್ಯಾಕ್ಟರ್ಸ ಶೋರೂಮ್‌ ಮಾಲೀಕರಾದ ಪ್ರಭುಗೌಡ ಪಾಟೀಲ, ಶೈಲಜಾ ಅಂಗಡಿ, ಟಾಫೆ ಕಂಪನಿಯ ವಿಭಾಗೀಯ ಮಾರಾಟ ವ್ಯವಸ್ಥಾಪಕ ಅವಿನಾಶ, ಕಲಬುರ್ಗಿ ವಲಯ ಮಾರಾಟ ವ್ಯವಸ್ಥಾಪಕ ಅರವಿಂದ ಜೋಶಿ, ಆದಿತ್ಯ ಅಂಗಡಿ, ಬಸವರಾಜ ಪಾಟೀಲ ನರಿಬೋಳ, ಶ್ರೀಹರ್ಷ ಅಂಗಡಿ, ಪ್ರವೀಣ ಗೌನಳ್ಳಿ, ಲಕ್ಷ್ಮೀಕಾಂತರೆಡ್ಡಿ ಇದ್ದರು. ಟ್ರ್ಯಾಕ್ಟರ್ ಖರೀದಿಸಿದ ನರಿಬೋಳ ಗ್ರಾಮದ ರೈತ ಮಲ್ಲಿಕಾರ್ಜುನ ಭಂಕೂರ ಅವರಿಗೆ ಹೊಸ ಟ್ರ್ಯಾಕ್ಟರ್ ಕೀ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT