ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂಚಾರ ವಿಭಾಗದ ಎಸಿಪಿ ವೀರೇಶ್, ‘ಸೆ 21ರಂದು ದಂಡದ ಮೊತ್ತ ಪರಿಷ್ಕರಣೆಯಾಗಿದ್ದು ನಿಜ. ಆದರೆ, ಅದು ಯಂತ್ರಗಳಲ್ಲಿ ತಕ್ಷಣಕ್ಕೆ ಅಪ್ಡೇಟ್ ಆಗಲಿಲ್ಲ. ಹೀಗಾಗಿ, ಹಿಂದಿನ ದರವೇ ಬಂದಿತ್ತು. ಅಧಿಸೂಚನೆ ನಮಗೆ ತಲುಪುವುದೂ ವಿಳಂಬವಾಗಿದ್ದರಿಂದ ಹೀಗಾಗಿದೆ. ಈಗಲೂ ಕೆಲ ಯಂತ್ರಗಳು ಅಪ್ಡೇಟ್ ಆಗಿಲ್ಲ. ಅದಕ್ಕೆ ಪರ್ಯಾಯವಾಗಿ ದಂಡದ ಹಣಕ್ಕೆ ಮೊದಲಿನ ಪದ್ಧತಿಯಂತೆ ಎಲೆಕ್ಟ್ರಾನಿಕ್ ಚಲನ್ ಬದಲು ಕಾಗದದ ರಸೀದಿ ನೀಡುತ್ತಿದ್ದೇವೆ’ ಎಂದರು.