ಜಾಧವ ಅವರು ಕಲಬುರಗಿಯಿಂದ ಬೆಡಸೂರ ತಾಂಡಾಕ್ಕೆ ಹೋಗುತ್ತಿರುವಾಗ ಸ್ಪಿಡ್ ಬ್ರೇಕರ್ ಬಳಿ ಬೆಂಗಾವಲು ವಾಹನ ಪಲ್ಟಿಯಾಯಿತು. ವಾಹನದಲ್ಲಿದ್ದ ಎಎಸ್ಐ ಸಲೀಂ, ಚಾಲಕ ಮಾಳಪ್ಪ, ಸಂಸದರ ಅಂಗರಕ್ಷಕ ಹಣಮಂತ ಪೂಜಾರಿ ಅವರಿಗೆ ಗಾಯವಾಗಿದ್ದು ಜಾಧವ ಅವರು ಬೆಂಗಾವಲು ವಾಹನದ ಪೊಲಿಸ್ ಸಿಬ್ಬಂದಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ನಂತರ ತಮ್ಮ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.