<p><strong>ಶಹಾಬಾದ್:</strong> ‘ನಗರದ ಹಳೆ ನಾಡಕಚೇರಿಯ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ₹20ಲಕ್ಷ ಅನುದಾನ ಬಂದಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ’ ಎಂದು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಶುಕ್ರವಾರ ಇಲ್ಲಿ ಹೇಳಿದರು.</p>.<p>ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.</p>.<p>‘ನೂತನ ಕಟ್ಟಡದಿಂದ ಜನರಿಗೆ ಅನುಕೂಲ ಆಗಲಿದೆ. ಉಳಿದ ಖಾಲಿ ಸ್ಥಳದಲ್ಲಿ ಇನ್ನೂ ಕಟ್ಟಡ ಬೇಕಾದರೆ ಅನುದಾನದ ಕೊರತೆಯಿಲ್ಲ. ಕೆ.ಕೆ.ಆರ್.ಡಿ.ಬಿಯಿಂದ ಇನ್ನಷ್ಟು ಅನುದಾನ ನೀಡಲಾಗುವುದು. ಗುತ್ತಿಗೆ ಹಿಡಿದ ನಿರ್ಮಿತಿ ಕೇಂದ್ರದವರು ಆದಷ್ಟು ಬೇಗನೆ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದರೇ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.</p>.<p>ತಹಶೀಲ್ದಾರ್ ಸುರೇಶ ವರ್ಮಾ, ನಗರಸಭೆ ಸದಸ್ಯರಾದ ಡಾ.ಅಹ್ಮದ ಪಟೇಲ್, ರವಿ ರಾಠೋಡ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕನಕಪ್ಪ ದಂಡಗುಲಕರ್, ಅಣವೀರ ಇಂಗಿನಶೆಟ್ಟಿ, ಬಸವರಾಜ ಮದ್ರಕಿ, ಬಸವರಾಜ ಬಿರಾದಾರ, ನಾಗರಾಜ ಮೇಲಗಿರಿ, ಅಣ್ಣಪ್ಪ ದಸ್ತಾಪೂರ, ಶರಣು ವಸ್ತ್ರದ್, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ,ಬಾಬಾ,ಭಾಗಿರಥಿ ಗುನ್ನಾಪೂರ,ಮಂಜುನಾಥ ಪೂಜಾರಿ, ಅನೀಲ ದತ್ತ,ಬಾಬಾಸಾಬ, ಅವಿನಾಶ ಕೊಂಡಯ್ಯ, ಶಂಕರ ಅಳೋಳ್ಳಿ, ಮಲ್ಲಿಕಾರ್ಜುನ ಕಟ್ಟಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ್:</strong> ‘ನಗರದ ಹಳೆ ನಾಡಕಚೇರಿಯ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ₹20ಲಕ್ಷ ಅನುದಾನ ಬಂದಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ’ ಎಂದು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಶುಕ್ರವಾರ ಇಲ್ಲಿ ಹೇಳಿದರು.</p>.<p>ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.</p>.<p>‘ನೂತನ ಕಟ್ಟಡದಿಂದ ಜನರಿಗೆ ಅನುಕೂಲ ಆಗಲಿದೆ. ಉಳಿದ ಖಾಲಿ ಸ್ಥಳದಲ್ಲಿ ಇನ್ನೂ ಕಟ್ಟಡ ಬೇಕಾದರೆ ಅನುದಾನದ ಕೊರತೆಯಿಲ್ಲ. ಕೆ.ಕೆ.ಆರ್.ಡಿ.ಬಿಯಿಂದ ಇನ್ನಷ್ಟು ಅನುದಾನ ನೀಡಲಾಗುವುದು. ಗುತ್ತಿಗೆ ಹಿಡಿದ ನಿರ್ಮಿತಿ ಕೇಂದ್ರದವರು ಆದಷ್ಟು ಬೇಗನೆ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದರೇ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.</p>.<p>ತಹಶೀಲ್ದಾರ್ ಸುರೇಶ ವರ್ಮಾ, ನಗರಸಭೆ ಸದಸ್ಯರಾದ ಡಾ.ಅಹ್ಮದ ಪಟೇಲ್, ರವಿ ರಾಠೋಡ, ಕಸಾಪ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕನಕಪ್ಪ ದಂಡಗುಲಕರ್, ಅಣವೀರ ಇಂಗಿನಶೆಟ್ಟಿ, ಬಸವರಾಜ ಮದ್ರಕಿ, ಬಸವರಾಜ ಬಿರಾದಾರ, ನಾಗರಾಜ ಮೇಲಗಿರಿ, ಅಣ್ಣಪ್ಪ ದಸ್ತಾಪೂರ, ಶರಣು ವಸ್ತ್ರದ್, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ,ಬಾಬಾ,ಭಾಗಿರಥಿ ಗುನ್ನಾಪೂರ,ಮಂಜುನಾಥ ಪೂಜಾರಿ, ಅನೀಲ ದತ್ತ,ಬಾಬಾಸಾಬ, ಅವಿನಾಶ ಕೊಂಡಯ್ಯ, ಶಂಕರ ಅಳೋಳ್ಳಿ, ಮಲ್ಲಿಕಾರ್ಜುನ ಕಟ್ಟಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>