ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 1986ರಲ್ಲಿ ಜಾರಿಗೆ ತಂದಿದ್ದ ಶಿಕ್ಷಣ ನೀತಿಯ ಸಾಧನೆಗಳು ಹಾಗೂ ಅದರ ನ್ಯೂನತೆಗಳನ್ನು ಸಮರ್ಪಕವಾಗಿ ಪರಾಮರ್ಶೆ ನಡೆಸದೇ ಮತ್ತೊಂದು ನೀತಿಯನ್ನು ತರಲು ಮುಂದಾಗಿದೆ. ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದು 30 ವರ್ಷ ಕಳೆದರೂ ದೇಶದಲ್ಲಿ 30 ಕೋಟಿ ಅನಕ್ಷರಸ್ಥರಾಗಿದ್ದರು. ಕಡ್ಡಾಯ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ವಿದ್ಯಾಲಯ ಫ್ರೇಮ್ವರ್ಕ್ನಂತಹ ಯೋಜನೆಗಳ ಪರಾಮರ್ಶೆ ಮಾಡಿಲ್ಲ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹೊಸಮಠ, ಎಂ.ಬಿ.ಸಜ್ಜನ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.