ಅತ್ಯಂತ ಜನನಿಬಿಡ ರಸ್ತೆ, ವೃತ್ತ, ಮಾರ್ಕೆಟ್, ಸರ್ಕಾರಿ ಕಚೇರಿ, ಕೋರ್ಟ್ ಮುಂತಾದ ಸ್ಥಳಗಳಲ್ಲಿ ಜನರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು ಮುಂದುವರಿದಿದೆ. ಅದರಲ್ಲೂ ಬೈಕ್, ಆಟೊ, ಕಾರ್ ನಿಲ್ಲಿಸಿ ಜನರ ಓಡಾಟಕ್ಕೆ ತೊಂದರೆ ಮಾಡಲಾಗುತ್ತಿದೆ. ಈ ಬಗ್ಗೆ ನಗರವಾಸಿಗಳಿಂದ ಪದೇಪದೇ ದೂರುಗಳು ಬಂದಿದ್ದು, ಅದನ್ನು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಇದನ್ನು ಎಲ್ಲ ವಾಹನ ಸವಾರರೂ ಕಡ್ಡಾಯವಾಗಿ ಪಾಲಿಸಬೇಕು ಎಂದೂ ಸ್ನೇಹಲ್ ತಿಳಿಸಿದ್ದಾರೆ.