ಕಲಬುರಗಿ: ರಂಜಾನ್ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಂಗಳವಾರ (ಏ.9) ಕ್ಷೌರದ ಅಂಗಡಿಗಳನ್ನು ತೆರೆದಿಡಬೇಕು ಎಂದು ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಜಿ.ಬೆಣ್ಣೂರ ತಿಳಿಸಿದ್ದಾರೆ.
ಹಬ್ಬದ ಪ್ರಯುಕ್ತ ಅಂದು ಎಲ್ಲ ಅಂಗಡಿಗಳ ಮಾಲೀಕರು ಕ್ಷೌರದಂಗಡಿ ತೆರೆದು ಸಹಕರಿಸಬೇಕು. ಮುಂದಿನ ವಾರದಿಂದ ಸಮಾಜದ ನಿಯಮದ ಪ್ರಕಾರ ಪ್ರತಿ ಮಂಗಳವಾರ ಬಂದ್ ಮಾಡಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.