ವಾರ್ಡ್ ನಂ. 12ರ ಚನ್ನಮ್ಮ ಪಾಟೀಲ, ವಾರ್ಡ್ ನಂ. 22ರ ಸಕ್ಕುಬಾಯಿ ರಾಮದಾಸ ಪವಾರ ಮತ್ತು ವಾರ್ಡ್ ನಂ. 23ರ ಶೋಭಾ ಹೂಗಾರ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಉಪಾಧ್ಯಕ್ಷ ಸ್ಥಾನವು ‘ಸಾಮಾನ್ಯ’ ಸ್ಥಾನಕ್ಕೆ ಮೀಸಲಾಗಿರುವುದರಿಂದ ವಾರ್ಡ್ ನಂ. 2 ರ ಶಿವಾನಂದ ಸ್ವಾಮಿ, ವಾರ್ಡ್ ನಂ. 16ರ ಚಂದ್ರಶೇಖರ ಕೆರೊಳ್ಳಿ ಮತ್ತು ವಾರ್ಡ್ ನಂ. 20ರ ಶ್ರೀನಿವಾಸ ಬಳ್ಳಾರಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.