<p>ಕಲಬುರ್ಗಿ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೋರ ನೇನಾ ಸಂಘಟನೆ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ಪರಿಶಿಷ್ಟ ಸಮುದಾಯಗಳ ಮಧ್ಯದಲ್ಲೇ ಗೊಂದಲ ಮೂಡಿಸುವಂಥ, ಭೇದ ಮಾಡುವಂತ ಅಂಶಗಳು ವರದಿಯಲ್ಲಿವೆ. ವರದಿ ಜಾರಿಗೆ ಆಗ್ರಹಿಸುವ ಭರದಲ್ಲಿ ಕೆಲವರು ಬಂಜಾರ ಸಮಾಜದ ಗುರು ಸೇವಾಲಾಲ್, ಭೋವಿ ಸಮಾಜದ ಗುರು ಸಿದ್ಧರಾಮೇಶ್ವರ ಶರಣರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಸಚಿವ ಪ್ರಭು ಚವಾಣ್ ಅವರನ್ನೂ ಅವಮಾನಿಸಿದ್ದಾರೆ. ಈ ಕುತಂತ್ರಗಳನ್ನು ತಡೆಯಬೇಕು ಎಂದೂ ಒತ್ತಾಯಿಸಿದರು.</p>.<p>ಭೋವಿ, ಬಂಜಾರಾ, ಕೊರಮ, ಕೊರಚ ಇತ್ಯಾದಿ ಜಾತಿಗಳಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಲು ಕೆಲವರು ಹವಣಿಸುತ್ತಿದ್ದಾರೆ. ಇಂತಹ ಕುತಂತ್ರಗಳು ನಿಲ್ಲಬೇಕು. ಏಕಪಕ್ಷೀಯಾಗಿ ಈ ವರದಿಯ ಶಿಫಾರಸಿಗಾಗಿ ನಡೆದ ಕುಮ್ಮಕ್ಕನ್ನು ನಾವು ಸಹಿಸುವುದಿಲ್ಲ ಎಂದು ಘೋಷಣೆ ಮೊಳಗಿಸಿದರು.</p>.<p>ಸಂಘಟನೆ ಮುಖಂಡರಾದ ಈಶ್ವರ ರಾಠೋಡ, ಡಾ.ಸಂತೋಷ ರಾಠೋಡ, ರಾಮಚಂದ್ರ ಜಾಧವ, ಲತಾ ರಾಠೋಡ, ಬಿ.ಬಿ.ನಾಯಕ, ಉಮೇಶ ಚವ್ಹಾಣ, ಶಿವು ಸೈನಿಕ, ಶ್ರೀಧರ ಚವ್ಹಾಣ, ರವಿ ಕಾರಬಾರಿ, ಗುರುರಾಜ ರಾಠೋಡ, ವಿನೋದ ರಾಠೋಡ, ಸುಭಾಷ ಜಾಧವ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರ್ಗಿ: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೋರ ನೇನಾ ಸಂಘಟನೆ ಜಿಲ್ಲಾ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ಪರಿಶಿಷ್ಟ ಸಮುದಾಯಗಳ ಮಧ್ಯದಲ್ಲೇ ಗೊಂದಲ ಮೂಡಿಸುವಂಥ, ಭೇದ ಮಾಡುವಂತ ಅಂಶಗಳು ವರದಿಯಲ್ಲಿವೆ. ವರದಿ ಜಾರಿಗೆ ಆಗ್ರಹಿಸುವ ಭರದಲ್ಲಿ ಕೆಲವರು ಬಂಜಾರ ಸಮಾಜದ ಗುರು ಸೇವಾಲಾಲ್, ಭೋವಿ ಸಮಾಜದ ಗುರು ಸಿದ್ಧರಾಮೇಶ್ವರ ಶರಣರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಸಚಿವ ಪ್ರಭು ಚವಾಣ್ ಅವರನ್ನೂ ಅವಮಾನಿಸಿದ್ದಾರೆ. ಈ ಕುತಂತ್ರಗಳನ್ನು ತಡೆಯಬೇಕು ಎಂದೂ ಒತ್ತಾಯಿಸಿದರು.</p>.<p>ಭೋವಿ, ಬಂಜಾರಾ, ಕೊರಮ, ಕೊರಚ ಇತ್ಯಾದಿ ಜಾತಿಗಳಿಗೆ ಸಾಂವಿಧಾನಿಕವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಲು ಕೆಲವರು ಹವಣಿಸುತ್ತಿದ್ದಾರೆ. ಇಂತಹ ಕುತಂತ್ರಗಳು ನಿಲ್ಲಬೇಕು. ಏಕಪಕ್ಷೀಯಾಗಿ ಈ ವರದಿಯ ಶಿಫಾರಸಿಗಾಗಿ ನಡೆದ ಕುಮ್ಮಕ್ಕನ್ನು ನಾವು ಸಹಿಸುವುದಿಲ್ಲ ಎಂದು ಘೋಷಣೆ ಮೊಳಗಿಸಿದರು.</p>.<p>ಸಂಘಟನೆ ಮುಖಂಡರಾದ ಈಶ್ವರ ರಾಠೋಡ, ಡಾ.ಸಂತೋಷ ರಾಠೋಡ, ರಾಮಚಂದ್ರ ಜಾಧವ, ಲತಾ ರಾಠೋಡ, ಬಿ.ಬಿ.ನಾಯಕ, ಉಮೇಶ ಚವ್ಹಾಣ, ಶಿವು ಸೈನಿಕ, ಶ್ರೀಧರ ಚವ್ಹಾಣ, ರವಿ ಕಾರಬಾರಿ, ಗುರುರಾಜ ರಾಠೋಡ, ವಿನೋದ ರಾಠೋಡ, ಸುಭಾಷ ಜಾಧವ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>