<p><strong>ವಾಡಿ:</strong> ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮಲ್ಲಿಕಾರ್ಜುನ ಮುತ್ಯಾ ಭಕ್ತರು ಸೋಮವಾರ ಕುಂಬಾರಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಬೆಳಿಗ್ಗೆಯೇ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ್ದ ಭಕ್ತರು, ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿ, ಮುತ್ಯಾನ ಮೇಲಿನ ಪ್ರಕರಣ ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು.</p>.<p>ಸ್ಥಳೀಯ ಕೋಲಿ ಸಮಾಜದ ಮುಖಂಡ ಶಿವಕುಮಾರ ಸುಣಗಾರ ನೇತೃತ್ವದಲ್ಲಿ ಅರ್ಧ ಗಂಟೆಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಮುತ್ಯಾನ ವಿರುದ್ಧ ಬಹುದೊಡ್ಡ ಷಡ್ಯಂತ್ರ ನಡೆದಿದ್ದು, ಅವಸರದಲ್ಲಿ ಪೋಕ್ಸೋ ಕೇಸ್ ದಾಖಲಿಸಿ ವರ್ಚಸ್ಸಿಗೆ ಮಸಿ ಬಳಿಯಲಾಗಿದೆ ಎಂದು ಆಕ್ರೋಶ ಹೊರಹಾಕಿದರು.</p>.<p>ಈ ವೇಳೆ ಶಿವಕುಮಾರ ಸುಣಗಾರ ಮಾತನಾಡಿ, ‘ದೊಡ್ಡ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಮುತ್ಯಾ ಭಕ್ತರ ಪಾಲಿನ ಆರಾಧ್ಯದೈವರಾಗಿದ್ದಾರೆ. ಮಕ್ಕಳ ಜತೆ ಮಕ್ಕಳಾಗಿ ಬೆರೆಯುವ ಅವರ ವಿರುದ್ಧ ಕಾಣದ ಕೈಗಳು ಕೆಲಸ ಮಾಡಿದ್ದು, ಕೂಡಲೇ ಪೋಕ್ಸೋ ಪ್ರಕರಣ ಕೈಬಿಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಾಲವಾರ ಉಪ ತಹಶೀಲ್ದಾರ್ ಮುತ್ತಪ್ಪ ಕತ್ನಳ್ಳಿ ಅವರಿಗೆ ಸಲ್ಲಿಸಲಾಯಿತು.</p>.<p>ಪ್ರತಿಭಟನೆಯಲ್ಲಿ ಭೀಮರಡ್ಡಿಗೌಡ ಕುರಾಳ, ಬಸವರಾಜ ಹಡಪದ, ಮಲ್ಲಿಕಾರ್ಜುನ ಅಲ್ಲೂರ್ಕರ, ಸೋಮನಾಥ ಕುಂಚೂರ, ವೆಂಕಟೇಶ ದುರ್ಗದ, ಸಂತೋಷ ಮಳಬಾ, ಶಿವಕುಮಾರ ಜ್ಯೋಗಿ, ಲಕ್ಷ್ಮಿಕಾಂತ್ ಮಳಬಾ, ರಾಯಪ್ಪ ಪೂಜಾರಿ, ಅಂಬು ಕೋಳಿಕಟ್ಟಿ ಸೇರಿದಂತೆ ಇತರರು ಇದ್ದರು.</p>
<p><strong>ವಾಡಿ:</strong> ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಮೇಲಿನ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮಲ್ಲಿಕಾರ್ಜುನ ಮುತ್ಯಾ ಭಕ್ತರು ಸೋಮವಾರ ಕುಂಬಾರಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಬೆಳಿಗ್ಗೆಯೇ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ್ದ ಭಕ್ತರು, ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿ, ಮುತ್ಯಾನ ಮೇಲಿನ ಪ್ರಕರಣ ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು.</p>.<p>ಸ್ಥಳೀಯ ಕೋಲಿ ಸಮಾಜದ ಮುಖಂಡ ಶಿವಕುಮಾರ ಸುಣಗಾರ ನೇತೃತ್ವದಲ್ಲಿ ಅರ್ಧ ಗಂಟೆಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಮುತ್ಯಾನ ವಿರುದ್ಧ ಬಹುದೊಡ್ಡ ಷಡ್ಯಂತ್ರ ನಡೆದಿದ್ದು, ಅವಸರದಲ್ಲಿ ಪೋಕ್ಸೋ ಕೇಸ್ ದಾಖಲಿಸಿ ವರ್ಚಸ್ಸಿಗೆ ಮಸಿ ಬಳಿಯಲಾಗಿದೆ ಎಂದು ಆಕ್ರೋಶ ಹೊರಹಾಕಿದರು.</p>.<p>ಈ ವೇಳೆ ಶಿವಕುಮಾರ ಸುಣಗಾರ ಮಾತನಾಡಿ, ‘ದೊಡ್ಡ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಮುತ್ಯಾ ಭಕ್ತರ ಪಾಲಿನ ಆರಾಧ್ಯದೈವರಾಗಿದ್ದಾರೆ. ಮಕ್ಕಳ ಜತೆ ಮಕ್ಕಳಾಗಿ ಬೆರೆಯುವ ಅವರ ವಿರುದ್ಧ ಕಾಣದ ಕೈಗಳು ಕೆಲಸ ಮಾಡಿದ್ದು, ಕೂಡಲೇ ಪೋಕ್ಸೋ ಪ್ರಕರಣ ಕೈಬಿಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.</p>.<p>ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಾಲವಾರ ಉಪ ತಹಶೀಲ್ದಾರ್ ಮುತ್ತಪ್ಪ ಕತ್ನಳ್ಳಿ ಅವರಿಗೆ ಸಲ್ಲಿಸಲಾಯಿತು.</p>.<p>ಪ್ರತಿಭಟನೆಯಲ್ಲಿ ಭೀಮರಡ್ಡಿಗೌಡ ಕುರಾಳ, ಬಸವರಾಜ ಹಡಪದ, ಮಲ್ಲಿಕಾರ್ಜುನ ಅಲ್ಲೂರ್ಕರ, ಸೋಮನಾಥ ಕುಂಚೂರ, ವೆಂಕಟೇಶ ದುರ್ಗದ, ಸಂತೋಷ ಮಳಬಾ, ಶಿವಕುಮಾರ ಜ್ಯೋಗಿ, ಲಕ್ಷ್ಮಿಕಾಂತ್ ಮಳಬಾ, ರಾಯಪ್ಪ ಪೂಜಾರಿ, ಅಂಬು ಕೋಳಿಕಟ್ಟಿ ಸೇರಿದಂತೆ ಇತರರು ಇದ್ದರು.</p>