’ಶುಕ್ರವಾರ ನನ್ನ ಮಗ ಶ್ರೀಕಾಂತ ಟಿವಿಯಲ್ಲಿ ಪುನೀತ್ ಸಾವಿಗೀಡಾದ ಸುದ್ದಿಗಳನ್ನು ನೋಡುತ್ತಿರುವುದನ್ನು ಗಮನಿಸಿ ಚಾನೆಲ್ ಬದಲಿಸಿ ಕ್ರಿಕೆಟ್ ಹಚ್ಚಿದ್ದೆ. ನಾನು ಹೊರಗೆ ಹೋದ ಬಳಿಕ ಮತ್ತೆ ಚಾನೆಲ್ ಬದಲಾಯಿಸಿ, ಸಾವಿನ ದೃಶ್ಯಗಳನ್ನು ನೋಡಿದ್ದ. ಶನಿವಾರ ಬೆಳಿಗ್ಗೆ ಮಗನ ಪತ್ನಿ ಓಡೋಡಿ ಬಂದು ಶ್ರೀಕಾಂತ ಬೆವರುತ್ತಿರುವುದನ್ನು ತಿಳಿಸಿದರು. ತಕ್ಷಣವೇ ಜಯದೇವ ಆಸ್ಪತ್ರೆಗೆ ಕರೆದೊಯ್ದಾದಾಗ, ಹೃದಯಾಘಾತ ಆಗಿದ್ದನ್ನು ಖಚಿತಪಡಿಸಿದ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಆದರೆ, ಅರ್ಧ ಗಂಟೆಯಲ್ಲಿ ಮಗ ಸಾವಿಗೀಡಾದ ಸುದ್ದಿ ಬಂತು‘ ಎಂದು ಶ್ರೀಕಾಂತ ತಂದೆ ಪ್ರಕಾಶ ಅಷ್ಠಗಿ ತಿಳಿಸಿದರು.