ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಏನೇನೋ ಸುಳ್ಳು ಹೇಳಿ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ, ಮುಸ್ಲಿಂ ವಿರೋಧಿ ದ್ವೇಷವನ್ನು ಜನಮಾನಸದಲ್ಲಿ ತುಂಬಿ ಅಧಿಕಾರಕ್ಕೆ ಬಂದ ಭ್ರಷ್ಟ ಬಿಜೆಪಿ ಸರ್ಕಾರ ಸಾಲು ಸಾಲಾಗಿ ಮಾಡಿದ ಭಾನಗಡಿ ಹಾಗೂ ತನ್ನೆಲ್ಲಾ ವಿಫಲತೆಗಳನ್ನು ಮುಚ್ಚಿಕೊಂಡು ಬೇರೆಡೆಗೆ ಸೆಳೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ, ಎನ್ಐಎ ಮತ್ತು ಯುಎಪಿಎ ಮುಂತಾದವುಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರ ಚಾರಿತ್ರ್ಯ ಹನನ ಮಾಡುತ್ತ, ತನ್ನನ್ನು ವಿರೋಧಿಸಿದವರನ್ನು ಜೈಲಿಗೆ ಅಟ್ಟುತ್ತಾ, ಹೇಯ ಕೆಲಸಗಳಲ್ಲಿ ತೊಡಗುತ್ತಿದೆ ಎಂದಿದ್ದಾರೆ.