ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿರುವ ರೌಡಿಯೊಬ್ಬನ ವಿಚಾರಣೆ ನಡೆಸಿದ ಎಸ್ಪಿ, ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ‘ಇಲ್ಲ. ಸರ್ಕಾರಕ್ಕೆ ರಾಯಧನ ಪಾವತಿಸಿ ಅನುಮತಿ ಪಡೆದ ಗುತ್ತಿಗೆದಾರರ ಮರಳನ್ನಷ್ಟೇ ಸಾಗಿಸುತ್ತೇನೆ’ ಎಂದು ಆ ರೌಡಿ ಪ್ರತಿಕ್ರಿಯೆ ನೀಡಿದ. ಆತ ಚಾಲನೆ ಮಾಡುವ ಟಿಪ್ಪರ್ ಸಂಖ್ಯೆಯನ್ನು ಪಡೆದುಕೊಂಡ ಅವರು, ಆ ಟಿಪ್ಪರ್ ಮಾಲೀಕರು ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿದರು.