ಕಮಲಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮುದ್ದಡಗಾ ಗ್ರಾಮದ ಸಂಸ್ಥಾನ ಹಿರೇಮಠದ ಪೀಠಾಧಿಪತಿ, ಶತಾಯುಷಿ ಸಂಗಮೇಶ್ವರ ಶಿವಾಚಾರ್ಯರು (101) ಭಾನುವಾರ ನಿಧನರಾದರು.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಕುರನೂರ ಗ್ರಾಮದಲ್ಲಿ ಜನಸಿದ್ದ ಸ್ವಾಮೀಜಿ, 1984ರಲ್ಲಿ ಮುದ್ದಡಗಾ ಗ್ರಾಮಕ್ಕೆ ಬಂದು ಸಂಸ್ಥಾನ ಹಿರೇಮಠದ ಪೀಠಾರೋಹಣ ಮಾಡಿದ್ದರು. ನಂತರ ಲೋಕಕಲ್ಯಾಣಕ್ಕೆ 51 ಬಾರಿ ಉಪವಾಸ ಅನುಷ್ಠಾನ ಮಾಡಿದ್ದರು.
ಸೋಮವಾರ ಬೆಳಿಗ್ಗೆ 10ಕ್ಕೆ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಂಜೆ 4ಕ್ಕೆ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.