ಸೇಡಂ: ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ತಾಲ್ಲೂಕಿನ ಬಿಬ್ಬಳ್ಳಿ ಮತ್ತು ಸಂಗಾವಿ (ಎಂ) ಸೇತುವೆಗಳು ನದಿ ನೀರಲ್ಲಿ ಮುಳುಗಿವೆ.
ನದಿ ನೀರಿನ ವೇಗ ಹೆಚ್ಚುತ್ತಿದ್ದು, ನೀರು ಗಂಟೆ ಗಂಟೆಗೂ ಪ್ರವಾಹ ಉಕ್ಕೇರುತ್ತಿದೆ. ಇದರಿಂದಾಗಿ ಸಂಗಾವಿ (ಎಂ) ಮತ್ತು ಬಿಬ್ಬಳ್ಳಿ ಸೇತುವೆ ಮೇಲಿಂದ ನೀರು ರಭಸದಿಂದ ಹರಿಯುತ್ತಿದೆ. ಇದರಿಂದ ಮಳಖೇಡನಿಂದ ಸಂಗಾವಿ(ಎಂ) ಗ್ರಾಮದ ಮಧ್ಯದ ಸಂಪರ್ಕ ಸ್ಥಗಿತಗೊಂಡಿದೆ.
ಬಿಬ್ಬಳ್ಳಿ ಸೇತುವೆ ಗೇಟ್ ತೆಗೆದ ಕಬ್ಬಿಣದ ಗೇಟಗಳು ಸೇತುವೆ ಮೇಲಿಟ್ಡಿದ್ದರಿಂದ ನೀರಿಗೆ ಹರಿದು ಸೇತುವೆ ಮಧ್ಯಭಾಗ ಸೇರಿದಂತೆ ಚೆಲ್ಲಾಪಿಲ್ಲಿಯಾಗಿವೆ. ಸೇತುವೆ ಮೇಲೆ ನೀರು ಬಂದಿದ್ದರಿಂದ ಸೇಡಂನಿಂದ ಬಿಬ್ಬಳ್ಳಿ ಮೇಲಿಂದ ಕಾಚೂರು ತೆರಳುವ ಮಾರ್ಗದ ಸಂಪರ್ಕ ಸ್ಥಗಿತಗೊಂಡಿದೆ ಎಂದು ಮುಖಂಡ ದೇವು ನಾಟಿಕಾರ 'ಪ್ರಜಾವಾಣಿ'ಗೆ ತಿಳಿಸಿದರು.