ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿಣಾ ನದಿಯಲ್ಲಿ ಹೆಚ್ಚಿದ ಪ್ರವಾಹ: ಬಿಬ್ಬಳ್ಳಿ, ಸಂಗಾವಿ ಸೇತುವೆ ಮುಳುಗಡೆ

Published 25 ಜುಲೈ 2023, 8:59 IST
Last Updated 25 ಜುಲೈ 2023, 8:59 IST
ಅಕ್ಷರ ಗಾತ್ರ

ಸೇಡಂ: ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ತಾಲ್ಲೂಕಿನ ಬಿಬ್ಬಳ್ಳಿ ಮತ್ತು ಸಂಗಾವಿ (ಎಂ) ಸೇತುವೆಗಳು ನದಿ ನೀರಲ್ಲಿ ಮುಳುಗಿವೆ.

ನದಿ ನೀರಿನ ವೇಗ ಹೆಚ್ಚುತ್ತಿದ್ದು, ನೀರು ಗಂಟೆ ಗಂಟೆಗೂ ಪ್ರವಾಹ ಉಕ್ಕೇರುತ್ತಿದೆ. ಇದರಿಂದಾಗಿ ಸಂಗಾವಿ (ಎಂ) ಮತ್ತು ಬಿಬ್ಬಳ್ಳಿ ಸೇತುವೆ ಮೇಲಿಂದ ನೀರು ರಭಸದಿಂದ ಹರಿಯುತ್ತಿದೆ. ಇದರಿಂದ ಮಳಖೇಡನಿಂದ ಸಂಗಾವಿ(ಎಂ) ಗ್ರಾಮದ ಮಧ್ಯದ ಸಂಪರ್ಕ ಸ್ಥಗಿತಗೊಂಡಿದೆ.

ಬಿಬ್ಬಳ್ಳಿ ಸೇತುವೆ ಗೇಟ್ ತೆಗೆದ ಕಬ್ಬಿಣದ ಗೇಟಗಳು ಸೇತುವೆ ಮೇಲಿಟ್ಡಿದ್ದರಿಂದ ನೀರಿಗೆ ಹರಿದು ಸೇತುವೆ ಮಧ್ಯಭಾಗ ಸೇರಿದಂತೆ ಚೆಲ್ಲಾಪಿಲ್ಲಿಯಾಗಿವೆ. ಸೇತುವೆ ಮೇಲೆ ನೀರು ಬಂದಿದ್ದರಿಂದ ಸೇಡಂನಿಂದ ಬಿಬ್ಬಳ್ಳಿ ಮೇಲಿಂದ ಕಾಚೂರು ತೆರಳುವ ಮಾರ್ಗದ ಸಂಪರ್ಕ ಸ್ಥಗಿತಗೊಂಡಿದೆ ಎಂದು ಮುಖಂಡ ದೇವು ನಾಟಿಕಾರ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT