<p><strong>ಅಫಜಲಪುರ(ಕಲಬುರಗಿ ಜಿಲ್ಲೆ):</strong> ಗಾಳಿಯಲ್ಲಿ ಗುಂಡು ಹಾರಿಸಿದ್ದ ತಾಲ್ಲೂಕಿನ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶಾಂತಲಿಂಗ ಶಿವಾಚಾರ್ಯ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.</p><p>ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬಳಿಕ ಆವರಣದಲ್ಲಿ ಪಿಎಸ್ಐ ಸೋಮಲಿಂಗ ಒಡೆಯರ್ ಅವರ ನೇತೃತ್ವದ ತಂಡ ಸ್ವಾಮೀಜಿಯನ್ನು ಬಂಧಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.</p><p>ಗ್ರಾಮದಲ್ಲಿನ ಇನ್ನೊಂದು ಗುಂಪು ಅವರನ್ನು ಬಿಡಿಸಿಕೊಂಡು ಹೋಗಲು ಮಂಗಳವಾರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಠಿಕಾಣಿ ಹೂಡಿದೆ.</p><p>ಈ ಹಿಂದೆ ಸ್ವಾಮೀಜಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಪಾನಮತ್ತರಾಗಿ ಅರೆಬರೆ ಬಟ್ಟೆ ಕಳಚಿಕೊಂಡು ಮಲಗಿಕೊಂಡಿದ್ದರು. ಇದೀಗ ಮತ್ತೆ ಮಠದಲ್ಲಿ ಇದ್ದುಕೊಂಡು ಭಾನುವಾರ ರಾತ್ರಿ ಗಾಳಿಯಲ್ಲಿ ಗುಂಡು ಹಾರಿಸಿ ಸುದ್ದಿಯಲ್ಲಿದ್ದಾರೆ.</p><p>ಮಠದ ವಿಚಾರವಾಗಿ ಗ್ರಾಮದಲ್ಲಿ ಎರಡು ಪಂಗಡಗಳಿದ್ದು, ಒಂದು ಗುಂಪು ಸ್ವಾಮೀಜಿ ಅವರನ್ನು ಮಠದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಗುಂಪು ಅವರನ್ನು ಮಠ ಬಿಟ್ಟು ಹೊರಗೆ ಕಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.</p>
<p><strong>ಅಫಜಲಪುರ(ಕಲಬುರಗಿ ಜಿಲ್ಲೆ):</strong> ಗಾಳಿಯಲ್ಲಿ ಗುಂಡು ಹಾರಿಸಿದ್ದ ತಾಲ್ಲೂಕಿನ ಉಡಚಾಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಪೀಠಾಧಿಪತಿ ಶಾಂತಲಿಂಗ ಶಿವಾಚಾರ್ಯ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.</p><p>ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಬಳಿಕ ಆವರಣದಲ್ಲಿ ಪಿಎಸ್ಐ ಸೋಮಲಿಂಗ ಒಡೆಯರ್ ಅವರ ನೇತೃತ್ವದ ತಂಡ ಸ್ವಾಮೀಜಿಯನ್ನು ಬಂಧಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.</p><p>ಗ್ರಾಮದಲ್ಲಿನ ಇನ್ನೊಂದು ಗುಂಪು ಅವರನ್ನು ಬಿಡಿಸಿಕೊಂಡು ಹೋಗಲು ಮಂಗಳವಾರ ಬೆಳಿಗ್ಗೆಯಿಂದ ಪಟ್ಟಣದಲ್ಲಿ ಠಿಕಾಣಿ ಹೂಡಿದೆ.</p><p>ಈ ಹಿಂದೆ ಸ್ವಾಮೀಜಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಪಾನಮತ್ತರಾಗಿ ಅರೆಬರೆ ಬಟ್ಟೆ ಕಳಚಿಕೊಂಡು ಮಲಗಿಕೊಂಡಿದ್ದರು. ಇದೀಗ ಮತ್ತೆ ಮಠದಲ್ಲಿ ಇದ್ದುಕೊಂಡು ಭಾನುವಾರ ರಾತ್ರಿ ಗಾಳಿಯಲ್ಲಿ ಗುಂಡು ಹಾರಿಸಿ ಸುದ್ದಿಯಲ್ಲಿದ್ದಾರೆ.</p><p>ಮಠದ ವಿಚಾರವಾಗಿ ಗ್ರಾಮದಲ್ಲಿ ಎರಡು ಪಂಗಡಗಳಿದ್ದು, ಒಂದು ಗುಂಪು ಸ್ವಾಮೀಜಿ ಅವರನ್ನು ಮಠದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದು ಗುಂಪು ಅವರನ್ನು ಮಠ ಬಿಟ್ಟು ಹೊರಗೆ ಕಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಮೂಲಗಳು ಹೇಳಿವೆ.</p>