ಚಿಂಚೋಳಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸಾಲೇಬೀರನಹಳ್ಳಿ ಗ್ರಾಮದ ಶರಣಬಸಪ್ಪ ಚಂದ್ರಶೆಟ್ಟಿ ಅವರನ್ನು ನೇಮಿಸಲಾಗಿದೆ ಎಂದು ವೇದಿಕೆಯ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ತಿಳಿಸಿದ್ದಾರೆ.
ವೇದಿಕೆಯ ತತ್ವ ಸಿದ್ಧಾಂತ ಶಿಸ್ತು ಅಳವಡಿಸಿಕೊಂಡು ಸಮಾಜದ ಸಂಘಟನೆಗೆ ಶ್ರಮಿಸಬೇಕೆಂದು ಅವರು ಅವರು ನೇಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.