‘ಹಿರೋಳ್ಳಿ ಪಂಚಾಯಿತಿಯಲ್ಲಿ ಕರ್ತವ್ಯಲೋಪವೆಸಗಿದ್ದ ಹಾಗೂ ಹಿಪ್ಪರಗಾ (ಎಸ್.ಎನ್) ಪಂಚಾಯಿತಿಯಲ್ಲಿ ₹ 21 ಲಕ್ಷ ವಂಚಿಸಿರುವ ಆನಂದಕುಮಾರ ದೊಡಮನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಾಥಖೇಡ್ ಪಿಡಿಒ ಅಮಾನತು ಮಾಡಬೇಕು. ಪಿಡಿಒ, ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆಂದೋಲಾ ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆಲೂರ ಪಂಚಾಯಿತಿಯ ಡಿಇಒ ಮತ್ತು ಮೂವರು ಪಿಡಿಒಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಲಾಯಿತು.