ವಿಶೇಷಾಂಕದಲ್ಲಿ ಏನಿದೆ? ಈ ಬಾರಿಯ ವಿಶೇಷಾಂಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಸಿರು ಬೆಳೆಸಲು ಮುಂದಾದ ಸಾಧಕರ ಬಗ್ಗೆ ವಿವರಗಳಿವೆ. ಬೀದರ್ ಜಿಲ್ಲೆಯಲ್ಲಿನ ಭಾವೈಕ್ಯದ ಕುರುಹಾಗಿ ಇರುವ ಕೋಟೆಗಳು, ಮಸೀದಿಗಳು, ಗುರುದ್ವಾರ ಹಾಗೂ ಈ ಧಾರ್ಮಿಕ, ಐತಿಹಾಸಿಕ ಸ್ಮಾರಕಗಳೊಂದಿಗೆ ಇಲ್ಲಿನ ಜನರು ಹೊಂದಿರುವ ಭಾವನಾತ್ಮಕ ಸಂಬಂಧಗಳನ್ನು ವಿವರಿಸುವ ಲೇಖನ, ಪ್ರಬಂಧ, ಕಾವ್ಯ ಸ್ಪರ್ಧೆಯಲ್ಲಿ ಪ್ರಕಟವಾದ ಪ್ರಬಂಧಗಳು ಹಾಗೂ ಕವನಗಳು, ಲಲಿತ ಪ್ರಬಂಧ, ಪ್ರವಾಸ ಕಥನ ಸೇರಿದಂತೆ ಸಾಹಿತ್ಯದ ಹೂರಣವೇ ಇದೆ.