ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪೂರ, ‘ಸಕ್ಕರೆ ಬೆಲೆ ಕಳೆದ ಬಾರಿ ಕೆ.ಜಿ.ಗೆ ₹ 32 ಇದ್ದುದು, ಈಗ ₹ 38 ಇದೆ. ಅದಕ್ಕೆ ತಕ್ಕಂತೆ ಕಬ್ಬಿನ ದರವನ್ನು ಪ್ರತಿ ಟನ್ಗೆ ₹ 2800ಕ್ಕೆ ನಿಗದಿ ಮಾಡುವ ಮೂಲಕ ಅದರ ಲಾಭವನ್ನು ರೈತರಿಗೆ ವರ್ಗಾಯಿಸಬೇಕು. ಆದರೆ, ಈ ಬಗ್ಗೆ ಚಕಾರವೆತ್ತರ ಕಾರ್ಖಾನೆಗಳು ಈಗಲೂ ₹ 2300 ದರದಲ್ಲೇ ಕಬ್ಬು ಖರೀದಿ ಮಾಡುತ್ತಿವೆ. ಅಲ್ಲದೇ, ಕಬ್ಬಿನ ಉಪ ಉತ್ಪನ್ನವಾದ ಇಥೆನಾಲ್ನ್ನು ಇಂಧನದಲ್ಲಿ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅದರಿಂದಲೂ ಕಾರ್ಖಾನೆಗಳು ಲಾಭ ಮಾಡಿಕೊಳ್ಳುತ್ತವೆ. ಹೀಗಾಗಿ, ದರವನ್ನು ಹೆಚ್ಚಿಸಲೇಬೇಕು‘ ಎಂದು ಒತ್ತಾಯಿಸಿದರು.