ಗಣರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಮಂಗಳವಾರಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ವಿಜಯೋತ್ಸವದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾವು ಎಲ್ಲಿಗೇ ಹೋದರೂ ಜನರು ಮೊದಲು ಕೇಳುವ ಪ್ರಶ್ನೆ; ಖರ್ಗೆ ಅವರಂಥವರನ್ನು ಜನ ಏಕೆ ಸೋಲಿಸಿದರು ಎಂಬುದು. ಈ ಪ್ರಶ್ನೆ ಎದುರಾದಾಗೆಲ್ಲ ನಾವು ಖರ್ಗೆ ಅವರಿಗೆ ಅಲ್ಲ; ಜನರಿಗೆ ದ್ರೋಹ ಮಾಡಿದ್ದೇವೆ ಎಂಬ ಭಾವನೆ ಮೂಡುತ್ತದೆ’ ಎಂದರು.