‘ರಾಜ್ಯದಲ್ಲಿ ಸುಮಾರು 34,000 ದೇವಸ್ಥಾನಗಳಿವೆ. ಅವುಗಳಲ್ಲಿ ಬಹುತೇಕ ಸರ್ಕಾರದ ಅಧೀನದಲ್ಲಿ ಇವೆ. ದೇವಸ್ಥಾನಗಳಿಗೆ ಬರುತ್ತಿರುವ ಹುಂಡಿಯ ಹಣ, ಮಳಿಗೆಗಳ ಬಾಡಿಗೆ, ಇತರೆ ದುಡ್ಡು ಸರ್ಕಾರದ ಖಜಾನೆಗೆ ಹೋಗುತ್ತಿದೆ. ಆದರೆ, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಸರ್ಕಾರ ಸರಿಯಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ಹೀಗಾಗಿ, ದೇವಸ್ಥಾನಗಳನ್ನು ಹಿಂದೂ ಸಂಘಟನೆಗಳ ವಶಕ್ಕೆ ಪಡೆದು ಅವುಗಳನ್ನು ಅಭಿವೃದ್ಧಿ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ದೇವಸ್ಥಾನ ರಕ್ಷಣೆ ಮಹಾ ಸಂಘ ರಚಿಸುತ್ತೇವೆ’ ಎಂದರು.