ಕಲಾವಿದೆ ಮೇಘಾ ಮಂಜುನಾಥ ಅವರು ಐದು ನದಿನಗಳ ಶಿಬಿರದಲ್ಲಿ ತರಬೇತಿ ನೀಡಲಿದ್ದಾರೆ. ಜೇಡಿಮಣ್ಣಿನ ವಿವಿಧ ಶಿಲ್ಪಕಲಾಕೃತಿಗಳು, ಮೂರ್ತಿಗಳು, ಸಾಂಪ್ರದಾಯಿಕ ಮಡಕೆಗಳು, ಆಲಂಕಾರಿಕ ವಸ್ತುಗಳು, ವಿವಿಧ ನಮೂನೆಯ ಆಭರಣಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳನ್ನು ತಯಾರಿಸುವ ಮಾರ್ಗದರ್ಶನ ಮಾಡಲಾಗುವುದು. ಇದಕ್ಕಾಗಿ ಬೆಂಗಳೂರಿನಿಂದ ಜೇಡಿಮಣ್ಣು ಕೂಡ ತರಿಸಲಾಗಿದ್ದು, ಮಣ್ಣು ಹದ ಮಾಡುವುದರಿಂದ ಹಿಡಿದು ಆಭರಣ ಸಿದ್ಧಪಡಿಸುವವರೆಗೆ ಎಲ್ಲವನ್ನೂ ಪ್ರಾಯೋಗಿಕವಾಗಿ ಹೇಳಿಕೊಡಲಾಗುವುದು. ಐದು ದಿನಗಳವರೆಗೆ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಕೂಡ ಇರಲಿದೆ ಎಂದುಮಹಾಂತೇಶ್ವರಿ ಎ. ಕಂಠಿ ತಿಳಿಸಿದ್ದಾರೆ.