ಪಿಡಿಒಗಳು ಕಡ್ಡಾಯವಾಗಿ ತಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಸಿನ ಮನೆ ಆರಂಭಿಸಬೇಕು. ನರೇಗಾ ಕಾರ್ಮಿಕರ ಮಕ್ಕಳನ್ನು ಅಲ್ಲಿ ಪಾಲನೆ ಪೋಷಣೆ ಮಾಡಲಾಗುತ್ತದೆ. ಅದಕ್ಕಾಗಿ ಸರ್ಕಾರ ಅನುದಾನ ನೀಡಲಿದೆ
ರಮೇಶ ಪಾಟೀಲ ನರೇಗಾ ಯೋಜನೆ ಸಹಾಯಕ ನಿರ್ದೇಶಕ
‘ಸರ್ಕಾರ ಶೀಘ್ರ ಅನುದಾನ ನೀಡಲಿ’
ಕೃಷಿ ವಲಯದಲ್ಲಿ ಕೆಲಸ ಕಾರ್ಯಗಳು ಮುಗಿದಿವೆ. ಅದಕ್ಕಾಗಿ ಕೃಷಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಕೆಲಸ ನೀಡಲಾಗುವುದು. ಹೀಗಾಗಿ ಕೂಸಿನ ಮನೆಯನ್ನು ಆರಂಭಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗುವುದು. ಆದಷ್ಟು ಬೇಗನೆ ಸರ್ಕಾರ ಮನೆ ನಿರ್ವಹಣೆಗೆ ಕೂಸಿನ ಮನೆ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಬೇಕು. ಇದು ಸರ್ಕಾರದ ಉತ್ತಮ ಯೋಜನೆಯಾಗಿದ್ದು ಬಡ ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗೌರ(ಬಿ) ಗ್ರಾ.ಪಂ ಅಧ್ಯಕ್ಷೆ ಶಬನ್ ಬೇಗಮ್ ಶೇಕ್ ಹೇಳಿದರು. ‘ಕೂಸಿನ ಮನೆಗೆ ಅನುದಾನ ಇಲ್ಲ’ ಶಿಶು ಪಾಲನ ಕೇಂದ್ರ ನಡೆಸಲು ಕೋಣೆ ಗುರುತಿಸಿ ಬಣ್ಣ ಬಳೆದು ಸಿದ್ಧತೆ ಮಾಡಲಾಗಿದೆ. ಆದರೆ ಮಕ್ಕಳು ಇಲ್ಲ ಅನುದಾನವು ಇಲ್ಲ ಏನು ಮಾಡಬೇಕು. ಹಿಂದೆ ನೆರೆಹಾವಳಿ ಸಮಯದಲ್ಲಿ ಕೈಯಿಂದ ₹ 5 ಲಕ್ಷ ಖರ್ಚು ಮಾಡಿದ್ದೇವೆ. ಇನ್ನು ಸರ್ಕಾರ ನೀಡಿಲ್ಲ. ನಾವು ಮತ್ತೆ ಕೂಸಿನ ಮನೆಗೆ ಹಣ ಎಲ್ಲಿಂದ ತರುವುದು. ಅದಕ್ಕಾಗಿ ಕೂಸಿನ ಮನೆ ಆರಂಭಿಸಿಲ್ಲ ಎಂದು ಪಿಡಿಒ ಶಂಕರ ದ್ಯಾಮಣ್ಣವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.