ಈ ಮೂವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ನಾಗೂರ ತಾಂಡಾದ ಮನೆಯೊಂದಕ್ಕೆ ಸೆಂಟ್ರಿಂಗ್ ಕೆಲಸಕ್ಕಾಗಿ ಯಂತ್ರೋಪಕರಣ ಸಮೇತ ಲಾರಿಯಲ್ಲಿ ತೆರಳಿದ್ದರು. ಕೆಲಸ ಮುಗಿಸಿ ಮರಳುವಾಗ ಎದುರಿನಿಂದ ಬರುತ್ತಿದ್ದ ಎತ್ತಿನ ಗಾಡಿಗೆ ಲಾರಿ ಡಿಕ್ಕಿ ಹೊಡೆಯಿತು. ಅಪಘಾತ ತಪ್ಪಿಸಲು ಚಾಲಕ ಲಾರಿಯನ್ನು ರಸ್ತೆ ಬದಿಗೆ ಇಳಿಸಿದ್ದರಿಂದ ಅದು ಉರುಳಿಬಿತ್ತು. ಲಾರಿಯಲ್ಲಿದ್ದ ಸೆಂಟ್ರಿಂಗ್ ಸಾಮಗ್ರಿಗಳು ಹಾಗೂ ಜಲ್ಲಿಕಲ್ಲು ಕಲಿಸುವ ಭಾರವಾದ ಯಂತ್ರಗಳು ಕಾರ್ಮಿಕರ ಮೇಲೆಯೇ ಬಿದ್ದವು. ಪರಿಣಾಮ ಕಾರ್ಮಿಕರು ತಾಸುಗಟ್ಟಲೇ ನರಳಾಡಿ ಮೃತಪಟ್ಟರು.