ತಾಲ್ಲೂಕಿನ ಸಿರನೂರ ಗ್ರಾಮದ ಅಂಬವ್ವ ಕುಂಬಾರ (59) ಮೃತರು. ನಾಗನಹಳ್ಳಿ ಕ್ರಾಸ್ನಿಂದ ಬಂದ ಲಾರಿ ಜೇವರ್ಗಿಯತ್ತ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ರಸ್ತೆ ಬಳಿ ನಿಂತಿದ್ದ ಅಂಬವ್ವ ಅವರಿಗೆ ಹಿಂದಿನ ಚಕ್ರ ಹಾಯ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ರಾಮಲಿಂಗ ಮಾಧವರಾವ್ ಎಂಬುವನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.