<p><strong>ಚಿಂಚೋಳಿ:</strong> ‘ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣ್ಕೆ ಮೌಲ್ಯ ಬರಬೇಕಾದರೆ ಸಂಸ್ಕಾರ ಅಗತ್ಯ. ಹಾರಕೂಡ ಶಿಕ್ಷಣ ಸಂಸ್ಥೆ ಸಂಸ್ಕಾರ ಭರಿತ ಶಿಕ್ಷಣ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ’ ಎಂದು ಡಿಡಿಪಿಯು ಸುರೇಶ ಅಕ್ಕಣ್ಣ ತಿಳಿಸಿದರು.</p>.<p>ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಸೇವಾ ಸಮಿತಿ ಟ್ರಸ್ಟ್ನ ಶಾಲೆಯ 34ನೇ ವಾರ್ಷಿಕೋತ್ಸವ ಮತ್ತು ಪಿಯು ಕಾಲೇಜಿನ ದಶಮಾನೋತ್ಸವ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಡೀನ್ ಲಕ್ಷ್ಮೀ ಪಾಟೀಲ ದಂಪತಿ ಮತ್ತು ಅಲಗೂಡ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ರಮೇಶ ರಾಜೋಳೆ ದಂಪತಿಗೆ ಕಲ್ಯಾಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ಟ್ರಸ್ಟ ಅಧ್ಯಕ್ಷ ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು.</p>.<p>ಕ್ಷೇತ್ರಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ, ಆಡಳಿತಾಧಿಕಾರಿ ನಾಗರಾಜ ಕಲಬುರಗಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ ಸೀಳಿನ್, ಮುಖಂಡರಾದ ವಿರೂಪಾಕ್ಷಪ್ಪ ಯಂಪಳ್ಳಿ, ಡಾ.ವಾಸುದೇವ ಕುಲಕರ್ಣಿ, ಬಸವರಾಜ ಐನೋಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಅಪ್ಪಣ್ಣ ಜನವಾಡ, ಬಸವರಾಜ ಪರಶೆಟ್ಟಿ, ಸಂಗಮೇಶ ಕನಕಟ, ಗೀತಾರಾಣಿ ಐನೋಳ್ಳಿ ಮೊದಲಾದವರು ಇದ್ದರು.</p>.<p>ರೇವಣಸಿದ್ದಯ್ಯ ಹಿರೇಮಠ ಕಲ್ಲೂರು ಪ್ರಾರ್ಥಿಸಿದರು. ಚನ್ನವೀರ ಸ್ವಾಗತಿಸಿದರು. ಸಂಗಮೇಶ ಕನಕಟ್ ನಿರೂಪಿಸಿದರು.</p>.<div><blockquote>ಆಧುನಿಕ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ. ನಮ್ಮಮಕ್ಕಳಿಗೆ ಮಾನವೀಯ ಮೌಲ್ಯಗಳು ತಿಳಿಸಿಕೊಡಲು ಮಠ ಮಾನ್ಯಗಳಿಗೆ ಕರೆದೊಯ್ಯಬೇಕು. ಮೋಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಈಗ ಮೋಬೈಲನಿಂದ ವರ್ಷದಲ್ಲಿಯೇ ನವ ವಿವಾಹಿತರು ವಿಚ್ಛೇದನಕ್ಕಾಗಿ ಮೊರೆ ಹೋಗುತ್ತಿದ್ದಾರೆ. </blockquote><span class="attribution">–ಲಕ್ಷ್ಮೀ ಪಾಟೀಲ, ಡೀನ್ ಶರಣಬಸವ ವಿವಿ ಕಲಬುರಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ‘ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಶಿಕ್ಷಣ ಅತ್ಯವಶ್ಯಕ. ಶಿಕ್ಷಣ್ಕೆ ಮೌಲ್ಯ ಬರಬೇಕಾದರೆ ಸಂಸ್ಕಾರ ಅಗತ್ಯ. ಹಾರಕೂಡ ಶಿಕ್ಷಣ ಸಂಸ್ಥೆ ಸಂಸ್ಕಾರ ಭರಿತ ಶಿಕ್ಷಣ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ’ ಎಂದು ಡಿಡಿಪಿಯು ಸುರೇಶ ಅಕ್ಕಣ್ಣ ತಿಳಿಸಿದರು.</p>.<p>ಇಲ್ಲಿನ ಚಂದಾಪುರದ ಹಾರಕೂಡ ಚನ್ನಬಸವೇಶ್ವರ ಸೇವಾ ಸಮಿತಿ ಟ್ರಸ್ಟ್ನ ಶಾಲೆಯ 34ನೇ ವಾರ್ಷಿಕೋತ್ಸವ ಮತ್ತು ಪಿಯು ಕಾಲೇಜಿನ ದಶಮಾನೋತ್ಸವ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.</p>.<p>ಕಾರ್ಯಕ್ರಮದಲ್ಲಿ ಶರಣಬಸವ ವಿವಿಯ ಡೀನ್ ಲಕ್ಷ್ಮೀ ಪಾಟೀಲ ದಂಪತಿ ಮತ್ತು ಅಲಗೂಡ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ರಮೇಶ ರಾಜೋಳೆ ದಂಪತಿಗೆ ಕಲ್ಯಾಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿಯನ್ನು ಟ್ರಸ್ಟ ಅಧ್ಯಕ್ಷ ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು.</p>.<p>ಕ್ಷೇತ್ರಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ, ಆಡಳಿತಾಧಿಕಾರಿ ನಾಗರಾಜ ಕಲಬುರಗಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ ಸೀಳಿನ್, ಮುಖಂಡರಾದ ವಿರೂಪಾಕ್ಷಪ್ಪ ಯಂಪಳ್ಳಿ, ಡಾ.ವಾಸುದೇವ ಕುಲಕರ್ಣಿ, ಬಸವರಾಜ ಐನೋಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಅಪ್ಪಣ್ಣ ಜನವಾಡ, ಬಸವರಾಜ ಪರಶೆಟ್ಟಿ, ಸಂಗಮೇಶ ಕನಕಟ, ಗೀತಾರಾಣಿ ಐನೋಳ್ಳಿ ಮೊದಲಾದವರು ಇದ್ದರು.</p>.<p>ರೇವಣಸಿದ್ದಯ್ಯ ಹಿರೇಮಠ ಕಲ್ಲೂರು ಪ್ರಾರ್ಥಿಸಿದರು. ಚನ್ನವೀರ ಸ್ವಾಗತಿಸಿದರು. ಸಂಗಮೇಶ ಕನಕಟ್ ನಿರೂಪಿಸಿದರು.</p>.<div><blockquote>ಆಧುನಿಕ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ. ನಮ್ಮಮಕ್ಕಳಿಗೆ ಮಾನವೀಯ ಮೌಲ್ಯಗಳು ತಿಳಿಸಿಕೊಡಲು ಮಠ ಮಾನ್ಯಗಳಿಗೆ ಕರೆದೊಯ್ಯಬೇಕು. ಮೋಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಈಗ ಮೋಬೈಲನಿಂದ ವರ್ಷದಲ್ಲಿಯೇ ನವ ವಿವಾಹಿತರು ವಿಚ್ಛೇದನಕ್ಕಾಗಿ ಮೊರೆ ಹೋಗುತ್ತಿದ್ದಾರೆ. </blockquote><span class="attribution">–ಲಕ್ಷ್ಮೀ ಪಾಟೀಲ, ಡೀನ್ ಶರಣಬಸವ ವಿವಿ ಕಲಬುರಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>