ಕಾಗಿಣಾ ನದಿಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಇರುವ ಶಂಕರವಾಡಿ ಸೇತುವೆ ಮೇಲಿನಿಂದ ಬೀದರ್ ಮೂಲದ ವೃದ್ದೆ ಮಲ್ಲಮ್ಮ ನದಿಗೆ ಹಾರಿದ್ದಾರೆ. ನದಿಯಲ್ಲಿ ಮುಳುಗುತ್ತಿದ್ದಾಗ ವಾಹನ ಸವಾರರು ನೋಡಿ ಕೂಗಿದ್ದಾರೆ. ಅದೇ ಸಮಯದಲ್ಲಿ ಕಲಬುರ್ಗಿಯಿಂದ ವಾಡಿಗೆ ಬೈಕ್ ಮೇಲೆ ತೆರಳುತ್ತಿದ್ದ ಸಮೀರ್ ಹಾಗೂ ಮಹ್ಮದ್ ಮೊಹ್ಸಿನ್ ಪೈಕಿ ಸಮೀರ್ ಎಂಬ ಯುವಕ ಸೇತುವೆ ಮೇಲಿನಿಂದ ನದಿಗೆ ಹಾರಿ ಮುಳುಗುತ್ತಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ.