<p><strong>ವಾಡಿ</strong>: ರಾಷ್ಟ್ರೀಯ ಹೆದ್ದಾರಿ 150ರ ಬಳಿರಾಮ್ ಚೌಕ್ ರೈಲ್ವೆ ಕ್ರಾಸಿಂಗ್ ಸಮಸ್ಯೆ ಹೆಚ್ಚುತ್ತಿದ್ದು, ಲೆವಲ್ ಕ್ರಾಸಿಂಗ್ನಲ್ಲಿ ಹಳಿಗಳು ರಸ್ತೆಗೆ ಸಮತಟ್ಟು ಇಲ್ಲದ ಕಾರಣ ವಾಹನ ಸವಾರರು ಕಷ್ಟಪಡುವಂತಾಗಿದೆ. </p>.<p>ಕಾರು, ಆಟೋ, ಬೈಕ್ಗಳ ತಳಭಾಗಕ್ಕೆ ಹಳಿಗಳು ತಾಗಿ ಹಾನಿ ಉಂಟಾಗುತ್ತಿದೆ. ಕಾರು ಮತ್ತು ಟಂಟಂ ಗಳ ಬಿಡಿಭಾಗ ಮುರಿದಿವೆ. ವಾಹನ ಸವಾರರು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಹಳಿಗಳನ್ನು ದಾಟಬೇಕಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.</p>.<p>ರೈಲ್ವೆ ಇಲಾಖೆಯು ನಿಯಮಿತವಾಗಿ ಲೆವೆಲ್ ಕ್ರಾಸಿಂಗ್ನ್ನು ಪರಿಶೀಲಿಸಿ, ರಸ್ತೆಯ ಮೇಲ್ಮೈಯನ್ನು ಹಳಿಗಳ ಮಟ್ಟಕ್ಕೆ ಸರಿಹೊಂದಿಸಿ ದುರಸ್ತಿ ಮಾಡದೆ ಬೇಜವಾಬ್ದಾರಿ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>2ನೇ ಹಂತದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು ಕೆಲಸ ಮಾತ್ರ ಅಮೆಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ಇನ್ನೆಷ್ಟು ದಿನ ಸಮಸ್ಯೆ ಎಸುರಿಸಬೇಕು. ರೈಲ್ವೆಹಳಿ ಮತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ</strong>: ರಾಷ್ಟ್ರೀಯ ಹೆದ್ದಾರಿ 150ರ ಬಳಿರಾಮ್ ಚೌಕ್ ರೈಲ್ವೆ ಕ್ರಾಸಿಂಗ್ ಸಮಸ್ಯೆ ಹೆಚ್ಚುತ್ತಿದ್ದು, ಲೆವಲ್ ಕ್ರಾಸಿಂಗ್ನಲ್ಲಿ ಹಳಿಗಳು ರಸ್ತೆಗೆ ಸಮತಟ್ಟು ಇಲ್ಲದ ಕಾರಣ ವಾಹನ ಸವಾರರು ಕಷ್ಟಪಡುವಂತಾಗಿದೆ. </p>.<p>ಕಾರು, ಆಟೋ, ಬೈಕ್ಗಳ ತಳಭಾಗಕ್ಕೆ ಹಳಿಗಳು ತಾಗಿ ಹಾನಿ ಉಂಟಾಗುತ್ತಿದೆ. ಕಾರು ಮತ್ತು ಟಂಟಂ ಗಳ ಬಿಡಿಭಾಗ ಮುರಿದಿವೆ. ವಾಹನ ಸವಾರರು ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಹಳಿಗಳನ್ನು ದಾಟಬೇಕಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.</p>.<p>ರೈಲ್ವೆ ಇಲಾಖೆಯು ನಿಯಮಿತವಾಗಿ ಲೆವೆಲ್ ಕ್ರಾಸಿಂಗ್ನ್ನು ಪರಿಶೀಲಿಸಿ, ರಸ್ತೆಯ ಮೇಲ್ಮೈಯನ್ನು ಹಳಿಗಳ ಮಟ್ಟಕ್ಕೆ ಸರಿಹೊಂದಿಸಿ ದುರಸ್ತಿ ಮಾಡದೆ ಬೇಜವಾಬ್ದಾರಿ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>2ನೇ ಹಂತದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು ಕೆಲಸ ಮಾತ್ರ ಅಮೆಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ಇನ್ನೆಷ್ಟು ದಿನ ಸಮಸ್ಯೆ ಎಸುರಿಸಬೇಕು. ರೈಲ್ವೆಹಳಿ ಮತ್ತು ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>