ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮುಕರಂಬಾ ಗ್ರಾಮದಲ್ಲಿ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಶಿವಪ್ಪ ವಿಠಲ್ (22) ಮೃತ ದುರ್ದೈವಿ.
ಈರುಳ್ಳಿ ಬೆಳೆಯ ಮಡಿಗೆ ನೀರುಣಿಸುವಾಗ ಬಾಗಿದ ವಿದ್ಯುತ್ ಕಂಬದ ತಂತಿಯಲ್ಲಿದ್ದ ವಿದ್ಯುತ್ ಪ್ರವಹಿಸಿ ವ್ಯಕ್ತಿಯ ಕೈ ಸುಟ್ಟಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೇರೆ ಹೊಲದಲ್ಲಿದ್ದ ತಾಯಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.