<p><strong>ಕೊಪ್ಪಳ:</strong> ತಾಲ್ಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಯೋಜನಾ ವೃತ್ತ ಕಚೇರಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ 100ಕ್ಕೂ ಅಧಿಕ ಸಿಬ್ಬಂದಿ ತಳಯೂರಿರುವುದು ಚರ್ಚೆಗೆ ಗ್ರಾಸವಾಗಿದೆ.<br /> <br /> ಪ್ರಮುಖ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳು 21 ವರ್ಷಗಳಿಂದ ಇದೇ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಕೆಲವು ಅಧಿಕಾರಿಗಳು ನಿಯಮಬಾಹಿರವಾಗಿ ಈ ಕಚೇರಿಗೆ ನಿಯೋಜನೆ ಮೇಲೆ ಬಂದಿರುವುದು ಸಹ ಹಲವು ಸಂಶಯಗಳಿಗೆ ಕಾರಣವಾಗಿದೆ.<br /> <br /> ಕೇವಲ ಮುನಿರಾಬಾದ್ನಲ್ಲಷ್ಟೇ ಅಲ್ಲದೇ, ವೃತ್ತ ಕಚೇರಿಯ ವ್ಯಾಪ್ತಿಗೆ ಒಳಪಡುವ ಸಿಂಧನೂರು, ಕುರುಗೋಡು, ವಡ್ಡರಹಟ್ಟಿ, ಬಳ್ಳಾರಿ, ಮಾನ್ವಿಕಚೇರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡರೆ ಅಂಥವರ ಸಂಖ್ಯೆ 200ರ ಗಡಿ ಮುಟ್ಟುತ್ತದೆ.<br /> <br /> `ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ತುಂಗಭದ್ರಾ ಯೋಜನಾ ವೃತ್ತ ಕಚೇರಿಯಲ್ಲಿ 10 ಜನ ಅಧಿಕಾರಿಗಳು 1981ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 13 ಜನ ಅಧಿಕಾರಿಗಳು 1982ರಿಂದ, 8 ಅಧಿಕಾರಿಗಳು 1983ರಿಂದ ಹಾಗೂ 11 ಅಧಿಕಾರಿಗಳು 1984ರಿಂದ ಇದೇ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ.<br /> <br /> 1985 ಹಾಗೂ 1986ರಿಂದ ತಲಾ 5 ಜನ ಅಧಿಕಾರಿಗಳು, 1995ರಿಂದ 7, 1998ರಿಂದ 3, 2000ನೇ ವರ್ಷದಿಂದ 4 ಜನ ಅಧಿಕಾರಿಗಳು ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, 2002ರಿಂದ 5, 2003ರಿಂದ 8, 2004ರಿಂದ ಮೂವರು ಅಧಿಕಾರಿಗಳು ಸೇವೆಯಲ್ಲಿದ್ದಾರೆ.<br /> <br /> ಇನ್ನೂ, ವಿಚಿತ್ರ ಎಂದರೆ, ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಭೂ ಪುನರ್ಸುಧಾರಣಾ ಕಾಮಗಾರಿಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೆಂಡರ್ ಕರೆಯಲಾಗಿದೆ ಎಂದು ಮುನಿರಾಬಾದ್ ಮೂಲದ ಸಾಹಿತ್ಯ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ 20.7.2010ರಂದು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ಈ ಸಂಬಂಧ ತನಿಖೆಗೆ ಸಹ ಆದೇಶಿಸಲಾಗಿದೆ.<br /> <br /> ಕಾಡಾ ನಿಯಮಾವಳಿಯಂತೆ ಕೃಷಿ ಭೂ ಅಭಿವೃದ್ಧಿ ಅಧಿಕಾರಿ ಮಾತ್ರ ಭೂ ಪುನರ್ಸುಧಾರಣೆಗಾಗಿ ಟೆಂಡರ್ ಕರೆಯಬೇಕು. ಆದರೆ, 19.5.2010ರಂದು ತಾಂತ್ರಿಕ ವಿಭಾಗದ ಭೂ ಅಭಿವೃದ್ದಿ ಅಧಿಕಾರಿ ನಿಗದಿತ ಅವಧಿಗಿಂತ 7 ತಿಂಗಳು ಮುಂಚಿತವಾಗಿ ಟೆಂಡರ್ ಕರೆದಿರುವುದನ್ನು ವೇದಿಕೆಯ ಅಧ್ಯಕ್ಷ ಎಂ.ಆರ್.ವೆಂಕಟೇಶ ದೂರಿನಲ್ಲಿ ಪ್ರಶ್ನಿಸಿದ್ದಾರೆ.<br /> <br /> ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ವಲಿಷಾ ಹಾಗೂ ಸಹಾಯಕ ಎಂಜಿನಿಯರ್ ಸೈಯದ್ ಷಂಷಾಲಂ ಕ್ರಮವಾಗಿ 1986 ಹಾಗೂ 1984ರಿಂದ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಇಬ್ಬರ ನೇಮಕಾತಿಯೇ ಅಕ್ರಮ ಹಾಗೂ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ದೂರು ಸಲ್ಲಿಸಿದ್ದರು.<br /> <br /> ಇದಕ್ಕೆ ಸ್ಪಂದಿಸಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಈ ಇಬ್ಬರು ಅಧಿಕಾರಿಗಳ ನೇಮಕಾತಿ ಕುರಿತು ಸತ್ಯಾಸತ್ಯತೆ ತಿಳಿಯಲು ಭೂ ಅಭಿವೃದ್ಧಿ ಅಧಿಕಾರಿ ವಿ.ಆರ್.ಮುರಳೀಧರ್ ಅಧ್ಯಕ್ಷತೆಯಲ್ಲಿ 7.3.2011ರಂದು ಸಮಿತಿ ರಚನೆ ಮಾಡಿದ್ದು, ತನಿಖೆ ಸಹ ನಡೆದಿದೆ.<br /> <br /> <strong>ಆಗ್ರಹ: </strong>ಈಚೆಗೆ ಡಿಡಿಪಿಐ, ಕಂದಾಯ ಕಚೇರಿ ಹಾಗೂ ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಹುದ್ದೆಯಲ್ಲಿದ್ದ ನೌಕರರನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸ್ಥಳಾಂತರ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.<br /> <br /> ಅದೇ ರೀತಿ ತುಂಗಭದ್ರಾ ಕಾಡಾ ಕಚೇರಿ, ಯೋಜನಾ ವೃತ್ತ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬ್ಬಂದಿಯ ಸ್ಥಳಾಂತರಕ್ಕೆ ಶಿಫಾರಸು ಮಾಡಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಕವಲೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ತಾಲ್ಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಯೋಜನಾ ವೃತ್ತ ಕಚೇರಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ 100ಕ್ಕೂ ಅಧಿಕ ಸಿಬ್ಬಂದಿ ತಳಯೂರಿರುವುದು ಚರ್ಚೆಗೆ ಗ್ರಾಸವಾಗಿದೆ.<br /> <br /> ಪ್ರಮುಖ ಹುದ್ದೆಗಳಲ್ಲಿರುವ ಕೆಲವು ಅಧಿಕಾರಿಗಳು 21 ವರ್ಷಗಳಿಂದ ಇದೇ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಕೆಲವು ಅಧಿಕಾರಿಗಳು ನಿಯಮಬಾಹಿರವಾಗಿ ಈ ಕಚೇರಿಗೆ ನಿಯೋಜನೆ ಮೇಲೆ ಬಂದಿರುವುದು ಸಹ ಹಲವು ಸಂಶಯಗಳಿಗೆ ಕಾರಣವಾಗಿದೆ.<br /> <br /> ಕೇವಲ ಮುನಿರಾಬಾದ್ನಲ್ಲಷ್ಟೇ ಅಲ್ಲದೇ, ವೃತ್ತ ಕಚೇರಿಯ ವ್ಯಾಪ್ತಿಗೆ ಒಳಪಡುವ ಸಿಂಧನೂರು, ಕುರುಗೋಡು, ವಡ್ಡರಹಟ್ಟಿ, ಬಳ್ಳಾರಿ, ಮಾನ್ವಿಕಚೇರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡರೆ ಅಂಥವರ ಸಂಖ್ಯೆ 200ರ ಗಡಿ ಮುಟ್ಟುತ್ತದೆ.<br /> <br /> `ಪ್ರಜಾವಾಣಿ~ಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ ತುಂಗಭದ್ರಾ ಯೋಜನಾ ವೃತ್ತ ಕಚೇರಿಯಲ್ಲಿ 10 ಜನ ಅಧಿಕಾರಿಗಳು 1981ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 13 ಜನ ಅಧಿಕಾರಿಗಳು 1982ರಿಂದ, 8 ಅಧಿಕಾರಿಗಳು 1983ರಿಂದ ಹಾಗೂ 11 ಅಧಿಕಾರಿಗಳು 1984ರಿಂದ ಇದೇ ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ.<br /> <br /> 1985 ಹಾಗೂ 1986ರಿಂದ ತಲಾ 5 ಜನ ಅಧಿಕಾರಿಗಳು, 1995ರಿಂದ 7, 1998ರಿಂದ 3, 2000ನೇ ವರ್ಷದಿಂದ 4 ಜನ ಅಧಿಕಾರಿಗಳು ಇದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, 2002ರಿಂದ 5, 2003ರಿಂದ 8, 2004ರಿಂದ ಮೂವರು ಅಧಿಕಾರಿಗಳು ಸೇವೆಯಲ್ಲಿದ್ದಾರೆ.<br /> <br /> ಇನ್ನೂ, ವಿಚಿತ್ರ ಎಂದರೆ, ತುಂಗಭದ್ರಾ ಕಾಡಾ ವ್ಯಾಪ್ತಿಯಲ್ಲಿ ಭೂ ಪುನರ್ಸುಧಾರಣಾ ಕಾಮಗಾರಿಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೆಂಡರ್ ಕರೆಯಲಾಗಿದೆ ಎಂದು ಮುನಿರಾಬಾದ್ ಮೂಲದ ಸಾಹಿತ್ಯ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ 20.7.2010ರಂದು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ಈ ಸಂಬಂಧ ತನಿಖೆಗೆ ಸಹ ಆದೇಶಿಸಲಾಗಿದೆ.<br /> <br /> ಕಾಡಾ ನಿಯಮಾವಳಿಯಂತೆ ಕೃಷಿ ಭೂ ಅಭಿವೃದ್ಧಿ ಅಧಿಕಾರಿ ಮಾತ್ರ ಭೂ ಪುನರ್ಸುಧಾರಣೆಗಾಗಿ ಟೆಂಡರ್ ಕರೆಯಬೇಕು. ಆದರೆ, 19.5.2010ರಂದು ತಾಂತ್ರಿಕ ವಿಭಾಗದ ಭೂ ಅಭಿವೃದ್ದಿ ಅಧಿಕಾರಿ ನಿಗದಿತ ಅವಧಿಗಿಂತ 7 ತಿಂಗಳು ಮುಂಚಿತವಾಗಿ ಟೆಂಡರ್ ಕರೆದಿರುವುದನ್ನು ವೇದಿಕೆಯ ಅಧ್ಯಕ್ಷ ಎಂ.ಆರ್.ವೆಂಕಟೇಶ ದೂರಿನಲ್ಲಿ ಪ್ರಶ್ನಿಸಿದ್ದಾರೆ.<br /> <br /> ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ವಲಿಷಾ ಹಾಗೂ ಸಹಾಯಕ ಎಂಜಿನಿಯರ್ ಸೈಯದ್ ಷಂಷಾಲಂ ಕ್ರಮವಾಗಿ 1986 ಹಾಗೂ 1984ರಿಂದ ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ಈ ಇಬ್ಬರ ನೇಮಕಾತಿಯೇ ಅಕ್ರಮ ಹಾಗೂ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ದೂರು ಸಲ್ಲಿಸಿದ್ದರು.<br /> <br /> ಇದಕ್ಕೆ ಸ್ಪಂದಿಸಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಈ ಇಬ್ಬರು ಅಧಿಕಾರಿಗಳ ನೇಮಕಾತಿ ಕುರಿತು ಸತ್ಯಾಸತ್ಯತೆ ತಿಳಿಯಲು ಭೂ ಅಭಿವೃದ್ಧಿ ಅಧಿಕಾರಿ ವಿ.ಆರ್.ಮುರಳೀಧರ್ ಅಧ್ಯಕ್ಷತೆಯಲ್ಲಿ 7.3.2011ರಂದು ಸಮಿತಿ ರಚನೆ ಮಾಡಿದ್ದು, ತನಿಖೆ ಸಹ ನಡೆದಿದೆ.<br /> <br /> <strong>ಆಗ್ರಹ: </strong>ಈಚೆಗೆ ಡಿಡಿಪಿಐ, ಕಂದಾಯ ಕಚೇರಿ ಹಾಗೂ ಜಿಲ್ಲೆಯ 4 ಸ್ಥಳೀಯ ಸಂಸ್ಥೆಗಳಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಹುದ್ದೆಯಲ್ಲಿದ್ದ ನೌಕರರನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸ್ಥಳಾಂತರ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.<br /> <br /> ಅದೇ ರೀತಿ ತುಂಗಭದ್ರಾ ಕಾಡಾ ಕಚೇರಿ, ಯೋಜನಾ ವೃತ್ತ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಿಬ್ಬಂದಿಯ ಸ್ಥಳಾಂತರಕ್ಕೆ ಶಿಫಾರಸು ಮಾಡಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಕವಲೂರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>